ಜ. 30ರಂದು ಗ್ರಾಮದ ಜಾತ್ರೆ ಸಮಯದಲ್ಲಿ ಎಲ್ಲಾ ಕೇರಿಗಳಿಗೆ ಉತ್ಸವ ಮೂರ್ತಿ ತೆಗೆದುಕೊಂಡು ಹೋಗುವಂತೆ ನಮ್ಮ ಕೇರಿಗೂ ತೆಗೆದುಕೊಂಡು ಬಂದರೆ ಹರಕೆ ತೀರಿಸಲು ಅನುಕೂಲವಾಗುತ್ತದೆ ಎಂದು ಪರಿಶಿಷ್ಟ ಜಾತಿಯವರು ಕೇಳಿಕೊಂಡಿದ್ದಾರೆ. ಸವರ್ಣೀಯ ಜಾತಿಗೆ ಸೇರಿದ ಮಂಜುನಾಥ್, ಚಿಕ್ಕರಂಗಯ್ಯ, ರಾಕೇಶ್ ಇತರರು ಇದಕ್ಕೆ ಅವಕಾಶ ನೀಡಲಿಲ್ಲ. ದೇವರನ್ನು ನಿಮ್ಮ ಕೇರಿಗೆ ಕಳುಹಿಸಿದರೆ ಅಮಂಗಳವಾಗುತ್ತದೆ ಎಂದು ಹೇಳಿ ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.