ರಾಜ್ಯದಲ್ಲಿ ಜನಾಂಗಕ್ಕೆ ಕುಳವ, ಕೊರಮ, ಕೊರಚ, ಕುರುವನ್, ಎರಕಲು, ಕೈಕಾಡಿ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿದೆ. ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿವರೆಗೂ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳು ಮರೀಚಿಕೆಯಾಗಿದೆ. ಆದ್ದರಿಂದ ಕುಳವ ಜನಾಂಗಕ್ಕೆ ಪ್ರತ್ಯೇಕ ನಿಗಮ ಮಾಡಬೇಕೆಂದು ಆಗ್ರಹಿಸಿದರು.