ಕಿತ್ತಾನಾಮಂಗಲ ಸರ್ವೇ ನಂ. 78ರ ಗೋಮಾಳದಲ್ಲಿ 1998ರಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ನೀಲಗಿರಿ ಸಸಿಗಳನ್ನು ಬೆಳೆಸಲಾಗಿತ್ತು. ಈ ಭಾಗದಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಸುಮಾರು 200 ನೀಲಗಿರಿ ಮರಗಳನ್ನು ಮೊಹಮ್ಮದ್ ಸೆಮ್ಮಿವುಲ್ಲಾ ಜೆಸಿಬಿ ಬಳಸಿ ಕೆಡವಿ ಜಮೀನು ಸಮತಟ್ಟು ಮಾಡಿದ್ದಾರೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.