'ಬಿಜೆಪಿ ಚುನಾವಣಾ ಪ್ರಚಾರದ ವೇದಿಕೆಗಳಲ್ಲಿ ನರೇಂದ್ರ ಮೋದಿ ಅವರು ಆ ಪಕ್ಷದ ಹಿರಿಯ ನಾಯಕರ ಯಾರೊಬ್ಬರ ಹೆಸರನ್ನೂ ಹೇಳುವುದಿಲ್ಲ. ಎಲ್ಲೊ ಸಾಂದರ್ಭಿಕವಾಗಿ ವಾಜಪೇಯಿ, ದೀನದಯಾಳ್ ಉಪಾಧ್ಯಾಯ ಅವರ ಹೆಸರು ಹೇಳುತ್ತಾರೆ. ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರಂತಹ ನಾಯಕರ ಹೆಸರು ಎಲ್ಲೂ ಹೇಳುವುದಿಲ್ಲ. ಪ್ರಧಾನಿಯವರ ಇಂತಹ ನಡವಳಿಕೆ ಬಗ್ಗೆ ಜನರಿಗೆ ಬೇಸರವಿದೆ' ಎಂದು ದೇವೇಗೌಡರು ಹೇಳಿದರು.