ರವಿಕುಮಾರ್ ಉತ್ತಮ ಚಿತ್ರಗಳನ್ನು ಬಿಡಿಸಿ ಬಣ್ಣ ಹಾಕುವ ಕಲೆಯನ್ನು ಗಮನಿಸಿದ ಬಿಆರ್ಸಿ ಶಿವಶಂಕರ್ಹಾಗೂ ಬಿ.ಪರಮೇಶ್ವರಯ್ಯ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯ ಅವರಿಗೆ ವಿಷಯ ಮುಟ್ಟಿಸಿದರು. ವಿಶ್ವ ಅಂಗವಿಕಲ ದಿನಾಚರಣೆಯಲ್ಲಿ ಸಂದರ್ಭದಲ್ಲಿ ರವಿಕುಮಾರ್ ಅವರನ್ನು ಗೌರವಿಸಲಾಯಿತು. ಶಾಸಕ ಮಸಾಲ ಜಯರಾಂ ಮತ್ತು ಜಿ.ಪಂ ಮಾಜಿ ಸದಸ್ಯ ಎನ್.ಆರ್. ಜಯರಾಂ ಬಾಲಕನ ಚಿತ್ರ ಬರವಣಿಗೆ ನೋಡಿ ಬೆನ್ನು ತಟ್ಟಿದರು.