ಕಳೆದೆರಡು ದಿನಗಳ ಹಿಂದೆ ಮಾರುತಿ ಬಡಾವಣೆಯಲ್ಲಿ ಎರಡು ಹುಚ್ಚುನಾಯಿಗಳು ಕಾಣಿಸಿಕೊಂಡಿದ್ದವು. ಅವು ರಾಮಗೋಪಾಲ್ ವೃತ್ತ, ಇಂದಿರಾ ನಗರ, ಬಾಲಾಜಿ ಚಿತ್ರ ಮಂದಿರದ ಸುತ್ತ ಮುತ್ತ ಇರುವ ನಾಯಿಗಳನ್ನು ಕಚ್ಚಿವೆ. ಇದರಿಂದ ಎಲ್ಲ ನಾಯಿಗಳಿಗೂ ಹುಚ್ಚು ಹಿಡಿಯುವ ಸಂಭವವಿದ್ದು, ಅವುಗಳನ್ನು ಕೂಡಲೇ ಪಟ್ಟಣ ಪಂಚಾಯಿತಿಯವರು ಹಿಡಿಯಬೇಕು. ಸಾರ್ವಜನಿಕರಿಗೆ ಕಚ್ಚಿದರೆ ಹೆಚ್ಚಿನ ತೊಂದರೆಯಾಗುತ್ತದೆ ಎಂದು ಮಾರುತಿ ಬಡಾವಣೆಯ ಟೈಲರ್ ಸೂರಪ್ಪ ತಿಳಿಸಿದ್ದಾರೆ.