<p><strong>ಪಾವಗಡ:</strong> ತಾಲ್ಲೂಕಿನ ನೀಲಮ್ಮನಹಳ್ಳಿ ಬಳಿಯ ಹೂವಿನ ತೋಟ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.</p>.<p>ಅನಂತರಾಮು ಅವರು ಸುಮಾರು 4 ಎಕರೆಯಲ್ಲಿ ಚಂಡು ಹೂವು ನಾಟಿ ಮಾಡಿದ್ದಾರೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಉತ್ತಮ ಬೆಳೆ ಬಂದಿದೆ. ಇದು ವೈ ಎನ್ ಹೊಸಕೋಟೆ- ಪಾವಗಡ ಮಾರ್ಗದಲ್ಲಿ ಸಂಚರಿಸುವವರ ಕಣ್ಮನವನ್ನು ಸೆಳೆಯುತ್ತಿದೆ.</p>.<p>ಈ ಮಾರ್ಗದಲ್ಲಿ ಸಂಚರಿಸುವವರು ತೋಟಕ್ಕೆ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಮದುವೆ, ನಿಶ್ಚಿತಾರ್ಥದ ಫೋಟೊ ಶೂಟ್ಗಾಗಿ ತೋಟಕ್ಕೆ ಮುಗಿಬೀಳುತ್ತಿದ್ದಾರೆ.</p>.<p>ದಸರಾ ಹಬ್ಬದ ಪ್ರಯುಕ್ತ ಗ್ರಾಮಗಳಿಗೆ ಬರುವವರಿಗೆ ತೋಟ ನೆಚ್ಚಿನ ತಾಣವಾಗಿದೆ.</p>.<p>ತಾಲ್ಲೂಕಿನ ನಿಡಗಲ್ ಹೋಬಳಿಯ ಬ್ಯಾಡನೂರು, ಗೊಲ್ಲರಹಟ್ಟಿ ಇತರೆಡೆ ಕೇವಲ 1 ರಿಂದ 2 ಕುಂಟೆಯಷ್ಟು ಪ್ರದೇಶದಲ್ಲಿ ಮಾತ್ರ ಚಂಡು ಹೂವು ಬೆಳೆಯಲಾಗಿದೆ. ಇಲ್ಲಿ ವಿಶಾಲ ಪ್ರದೇಶದಲ್ಲಿ ಬೆಳೆ ಇರುವುದರಿಂದ ಸುಂದರವಾಗಿದೆ ಎಂದು ರೈತರು ಹೇಳುತ್ತಾರೆ.</p>.<p>‘30 ಸಾವಿರ ಸಸಿಗಳನ್ನು ನಾಟಿ ಮಾಡಲಾಗಿದೆ. ಸುಮಾರು ₹2 ಲಕ್ಷ ಖರ್ಚಾಗಿದೆ. ಕೆ.ಜಿ.ಗೆ ₹100 ಸಿಗುತ್ತಿತ್ತು. ಮಳೆ ಬೀಳುತ್ತಿರುವುದರಿಂದ ₹ 65ರಂತೆ ಮಾರಾಟ ಮಾಡಲಾಗಿದೆ ಎಂದು ರೈತ ಅನಂತರಾಮು ತಿಳಿಸಿದರು.</p>.<p>‘ಕೃತಕ ಸೀನರಿಗಿಂತಲೂ ನೈಸರ್ಗಿಕವಾಗಿರುವ ಹೂವಿನ ತೋಟದಲ್ಲಿ ಫೊಟೊ ಶೂಟ್ ಮಾಡಿಸಿದರೆ ಉತ್ತಮ. ಹೀಗಾಗಿ ಹೂವಿನ ತೋಟದಲ್ಲಿ ಫೊಟೊ ಶೂಟ್ ಮಾಡಿಸಲಾಗುತ್ತಿದೆ. ತೋಟದ ಮಾಲೀಕರು ಯಾವುದೇ ಶುಲ್ಕ ಪಡೆಯದೆ ಸಹಕಾರ ನೀಡುತ್ತಿದ್ದಾರೆ’ ಎಂದು ನವ ವಿವಾಹಿತ ಸಂತೋಷ್ ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ತಾಲ್ಲೂಕಿನ ನೀಲಮ್ಮನಹಳ್ಳಿ ಬಳಿಯ ಹೂವಿನ ತೋಟ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.</p>.<p>ಅನಂತರಾಮು ಅವರು ಸುಮಾರು 4 ಎಕರೆಯಲ್ಲಿ ಚಂಡು ಹೂವು ನಾಟಿ ಮಾಡಿದ್ದಾರೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಉತ್ತಮ ಬೆಳೆ ಬಂದಿದೆ. ಇದು ವೈ ಎನ್ ಹೊಸಕೋಟೆ- ಪಾವಗಡ ಮಾರ್ಗದಲ್ಲಿ ಸಂಚರಿಸುವವರ ಕಣ್ಮನವನ್ನು ಸೆಳೆಯುತ್ತಿದೆ.</p>.<p>ಈ ಮಾರ್ಗದಲ್ಲಿ ಸಂಚರಿಸುವವರು ತೋಟಕ್ಕೆ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಮದುವೆ, ನಿಶ್ಚಿತಾರ್ಥದ ಫೋಟೊ ಶೂಟ್ಗಾಗಿ ತೋಟಕ್ಕೆ ಮುಗಿಬೀಳುತ್ತಿದ್ದಾರೆ.</p>.<p>ದಸರಾ ಹಬ್ಬದ ಪ್ರಯುಕ್ತ ಗ್ರಾಮಗಳಿಗೆ ಬರುವವರಿಗೆ ತೋಟ ನೆಚ್ಚಿನ ತಾಣವಾಗಿದೆ.</p>.<p>ತಾಲ್ಲೂಕಿನ ನಿಡಗಲ್ ಹೋಬಳಿಯ ಬ್ಯಾಡನೂರು, ಗೊಲ್ಲರಹಟ್ಟಿ ಇತರೆಡೆ ಕೇವಲ 1 ರಿಂದ 2 ಕುಂಟೆಯಷ್ಟು ಪ್ರದೇಶದಲ್ಲಿ ಮಾತ್ರ ಚಂಡು ಹೂವು ಬೆಳೆಯಲಾಗಿದೆ. ಇಲ್ಲಿ ವಿಶಾಲ ಪ್ರದೇಶದಲ್ಲಿ ಬೆಳೆ ಇರುವುದರಿಂದ ಸುಂದರವಾಗಿದೆ ಎಂದು ರೈತರು ಹೇಳುತ್ತಾರೆ.</p>.<p>‘30 ಸಾವಿರ ಸಸಿಗಳನ್ನು ನಾಟಿ ಮಾಡಲಾಗಿದೆ. ಸುಮಾರು ₹2 ಲಕ್ಷ ಖರ್ಚಾಗಿದೆ. ಕೆ.ಜಿ.ಗೆ ₹100 ಸಿಗುತ್ತಿತ್ತು. ಮಳೆ ಬೀಳುತ್ತಿರುವುದರಿಂದ ₹ 65ರಂತೆ ಮಾರಾಟ ಮಾಡಲಾಗಿದೆ ಎಂದು ರೈತ ಅನಂತರಾಮು ತಿಳಿಸಿದರು.</p>.<p>‘ಕೃತಕ ಸೀನರಿಗಿಂತಲೂ ನೈಸರ್ಗಿಕವಾಗಿರುವ ಹೂವಿನ ತೋಟದಲ್ಲಿ ಫೊಟೊ ಶೂಟ್ ಮಾಡಿಸಿದರೆ ಉತ್ತಮ. ಹೀಗಾಗಿ ಹೂವಿನ ತೋಟದಲ್ಲಿ ಫೊಟೊ ಶೂಟ್ ಮಾಡಿಸಲಾಗುತ್ತಿದೆ. ತೋಟದ ಮಾಲೀಕರು ಯಾವುದೇ ಶುಲ್ಕ ಪಡೆಯದೆ ಸಹಕಾರ ನೀಡುತ್ತಿದ್ದಾರೆ’ ಎಂದು ನವ ವಿವಾಹಿತ ಸಂತೋಷ್ ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>