ಕುಣಿಗಲ್ ತಾಲ್ಲೂಕಿನತೇವಡನಹಳ್ಳಿ ಶಿವಣ್ಣ ಅವರು ಚಿನ್ನದ ರಥ ಸಮರ್ಪಿಸಿದವರು. ಬೆಂಗಳೂರಿನಲ್ಲಿ ನೆಲೆಸಿ ಬಸ್ ಕಂಡಕ್ಟರ್ ಆಗಿದ್ದು, ನಂತರ ಗುತ್ತಿಗೆದಾರರಾಗಿ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದಾರೆ. ಬುಧವಾರ ನಡೆದ ಸರಳ ಸಮಾರಂಭದಲ್ಲಿ ಬಾಳೆಹೊನ್ನೂರು ಶಾಖಾ ಮಠದ ರೇಣುಕಾಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಿವಣ್ಣ, ರುದ್ರಾಣಮ್ಮ ದಂಪತಿ ಚಿನ್ನದ ರಥವನ್ನು ದೇಗುಲಕ್ಕೆ ಸಮರ್ಪಿಸಿದ್ದಾರೆ.