<p><strong>ತೋವಿನಕೆರೆ:</strong> ಯುವಕರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ ಎನ್ನುವ ಮಾತನ್ನು ಸುಳ್ಳು ಮಾಡಿರುವ ಯುವಕರ ಗುಂಪೊಂದು ಗುತ್ತಿಗೆ ಮತ್ತು ಗಂಟೆ ಲೆಕ್ಕದಲ್ಲಿ ವ್ಯವಸಾಯ ಚಟುವಟಿಕೆಗಳನ್ನು ಮಾಡಿಕೊಟ್ಟು ಸಾವಿರಾರು ರೂಪಾಯಿ ಆದಾಯ ಪಡೆಯುತ್ತಿದ್ದಾರೆ.</p>.<p>ಗ್ರಾಮದ ಸಮೀಪದ ಜೋನಿಗರಹಳ್ಳಿ ಮತ್ತು ಮಾವಕೆರೆ ಗ್ರಾಮಗಳ 28 ವಯಸ್ಸಿನ ಒಳಗಿನ ಏಳು ಮಂದಿ ಯುವಕರು ಅಡಿಕೆ ಕೀಳುವುದು, ಅಡಿಕೆ ಬೇಯಿಸುವುದು, ಯಂತ್ರದ ಮೂಲಕ ಕಳೆ ತೆಗೆಯುವುದು, ಗುಂಡಿ ತೆಗೆದು ಗಿಡಗಳನ್ನು ಇಡುವುದು ಸೇರಿದಂತೆ ಹಲವು ಕೃಷಿ ಕೆಲಸಗಳನ್ನು ಮಾಡುತ್ತಿದ್ದಾರೆ.</p>.<p>ಕರೆ ಮಾಡಿ ‘ನಮಗೆ ಇಂತಹ ಕೆಲಸ ಮಾಡಬೇಕು’ ಎಂದು ತಿಳಿಸಿದರೆ ಉಪಕರಣಗಳ ಜೊತೆ ಬರುವ ಯುವಕರು ಕೆಲಸ ಮುಗಿಸುತ್ತಾರೆ. ಯುವಕರ ತಿಂಗಳ ದುಡಿಮೆ ಗಮನ ಸೆಳೆಯುವಂತಿದೆ. ಸಿದ್ಧೇಶ, ಮಧು, ಅನಿಲ್ ಕುಮಾರ್, ಕಾಂತರಾಜು, ನಾಗರಾಜು, ಪ್ರದೀಪ್ ತಂಡದಲ್ಲಿದ್ದಾರೆ.</p>.<p>ತೋವಿನಕೆರೆ ಪಕ್ಕದ ನಂದಿಹಳ್ಳಿ ಮತ್ತು ಹೊಲ್ತಾಳು ಗ್ರಾಮಗಳಲ್ಲಿ ಇದೇ ರೀತಿ ಕೃಷಿ ಕಾರ್ಮಿಕರ ತಂಡಗಳಿವೆ.</p>.<p>‘ತಿಂಗಳಲ್ಲಿ ಕೆಲವು ಸಲ ಯಾವ ದಿನವೂ ಬಿಡುವು ಸಿಗುವುದಿಲ್ಲ. ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಕೆಲಸ ಇರುತ್ತದೆ. ನಾವು ಅಡಿಕೆ ತೋಟಗಳ ಬೆಳೆಯನ್ನು ಗುತ್ತಿಗೆ ಪಡೆಯುತ್ತೇವೆ. ನಮ್ಮಲ್ಲಿ ಮುಯ್ಯಾಳು ಪದ್ಧತಿ ಅನುಸರಿಸಿ ಕೆಲಸ ಮಾಡಿಕೊಳ್ಳುತ್ತೇವೆ’ ಎನ್ನುತ್ತಾರೆ ಜೋನಿಗರಹಳ್ಳಿ ಪ್ರದೀಪ್ ಬಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋವಿನಕೆರೆ:</strong> ಯುವಕರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ ಎನ್ನುವ ಮಾತನ್ನು ಸುಳ್ಳು ಮಾಡಿರುವ ಯುವಕರ ಗುಂಪೊಂದು ಗುತ್ತಿಗೆ ಮತ್ತು ಗಂಟೆ ಲೆಕ್ಕದಲ್ಲಿ ವ್ಯವಸಾಯ ಚಟುವಟಿಕೆಗಳನ್ನು ಮಾಡಿಕೊಟ್ಟು ಸಾವಿರಾರು ರೂಪಾಯಿ ಆದಾಯ ಪಡೆಯುತ್ತಿದ್ದಾರೆ.</p>.<p>ಗ್ರಾಮದ ಸಮೀಪದ ಜೋನಿಗರಹಳ್ಳಿ ಮತ್ತು ಮಾವಕೆರೆ ಗ್ರಾಮಗಳ 28 ವಯಸ್ಸಿನ ಒಳಗಿನ ಏಳು ಮಂದಿ ಯುವಕರು ಅಡಿಕೆ ಕೀಳುವುದು, ಅಡಿಕೆ ಬೇಯಿಸುವುದು, ಯಂತ್ರದ ಮೂಲಕ ಕಳೆ ತೆಗೆಯುವುದು, ಗುಂಡಿ ತೆಗೆದು ಗಿಡಗಳನ್ನು ಇಡುವುದು ಸೇರಿದಂತೆ ಹಲವು ಕೃಷಿ ಕೆಲಸಗಳನ್ನು ಮಾಡುತ್ತಿದ್ದಾರೆ.</p>.<p>ಕರೆ ಮಾಡಿ ‘ನಮಗೆ ಇಂತಹ ಕೆಲಸ ಮಾಡಬೇಕು’ ಎಂದು ತಿಳಿಸಿದರೆ ಉಪಕರಣಗಳ ಜೊತೆ ಬರುವ ಯುವಕರು ಕೆಲಸ ಮುಗಿಸುತ್ತಾರೆ. ಯುವಕರ ತಿಂಗಳ ದುಡಿಮೆ ಗಮನ ಸೆಳೆಯುವಂತಿದೆ. ಸಿದ್ಧೇಶ, ಮಧು, ಅನಿಲ್ ಕುಮಾರ್, ಕಾಂತರಾಜು, ನಾಗರಾಜು, ಪ್ರದೀಪ್ ತಂಡದಲ್ಲಿದ್ದಾರೆ.</p>.<p>ತೋವಿನಕೆರೆ ಪಕ್ಕದ ನಂದಿಹಳ್ಳಿ ಮತ್ತು ಹೊಲ್ತಾಳು ಗ್ರಾಮಗಳಲ್ಲಿ ಇದೇ ರೀತಿ ಕೃಷಿ ಕಾರ್ಮಿಕರ ತಂಡಗಳಿವೆ.</p>.<p>‘ತಿಂಗಳಲ್ಲಿ ಕೆಲವು ಸಲ ಯಾವ ದಿನವೂ ಬಿಡುವು ಸಿಗುವುದಿಲ್ಲ. ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಕೆಲಸ ಇರುತ್ತದೆ. ನಾವು ಅಡಿಕೆ ತೋಟಗಳ ಬೆಳೆಯನ್ನು ಗುತ್ತಿಗೆ ಪಡೆಯುತ್ತೇವೆ. ನಮ್ಮಲ್ಲಿ ಮುಯ್ಯಾಳು ಪದ್ಧತಿ ಅನುಸರಿಸಿ ಕೆಲಸ ಮಾಡಿಕೊಳ್ಳುತ್ತೇವೆ’ ಎನ್ನುತ್ತಾರೆ ಜೋನಿಗರಹಳ್ಳಿ ಪ್ರದೀಪ್ ಬಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>