ಸ್ಥಳೀಯವಾಗಿ ಸಂತೆ ಆರಂಭವಾಗಿರುವುದರಿಂದ ಸ್ಥಳೀಯ ಸಂಪನ್ಮೂಲ ಸ್ಥಳೀಯರಲ್ಲಿಯೇ ಹಂಚಿಕೆಯಾಗುವ ಜೊತೆಗೆ ಉತ್ತಮ ವಹಿವಾಟು ನಡೆಯಲು ಸಾಧ್ಯ.
ಚಿರಂಜೀವಿ ಕರವೇ ಹೋಬಳಿ ಘಟಕದ ಅಧ್ಯಕ್ಷ
ಹಾಗಲವಾಡಿ ಸುತ್ತಮುತ್ತ ನೀರಾವರಿ ಸೌಕರ್ಯ ಕಡಿಮೆ. ಕುರಿ ಮೇಕೆ ಎಮ್ಮೆಗಳನ್ನು ಕಟ್ಟಿಕೊಂಡು ಬದುಕು ಸಾಗಿಸುತಿದ್ದೇವೆ. ಸ್ಥಳೀಯವಾಗಿ ಸಂತೆ ಪ್ರಾರಂಭಿಸಿರುವುದು ಅನುಕೂಲವಾಗಿದೆ. ಮೊದಲಿಗಿಂತ ಹೆಚ್ಚಿನ ಆದಾಯ ಸಿಗುತ್ತಿದೆ.
ಬೋರಜ್ಜ ಸ್ಥಳೀಯ
ಮುಂದಿನ ದಿನಗಳಲ್ಲಿ ಅಲ್ಪ ಸುಂಕ ವಸೂಲಿ
ಪೂರ್ವಜರ ಕಾಲದಲ್ಲಿ ಕುರಿ ಮೇಕೆ ವ್ಯಾಪಾರ ನಮ್ಮ ಗ್ರಾಮದಲ್ಲಿಯೇ ನಡೆಯುತ್ತಿತ್ತು ಎಂದು ಕೇಳಿದ್ದೆ. ಇತ್ತೀಚೆಗೆ ಸ್ಥಳೀಯರು ಕುರಿ ಮೇಕೆ ವ್ಯಾಪಾರಕ್ಕಾಗಿ ಪರದಾಡುತ್ತಿರುವುದನ್ನು ಕಂಡು ಇರುವ ಸೌಲಭ್ಯಗಳನ್ನು ಬಳಸಿಕೊಂಡು ಸಂತೆ ಪ್ರಾರಂಭಿಸಿದ್ದೇವೆ. ಸದ್ಯಕ್ಕೆ ರೈತರಿಂದ ಯಾವುದೇ ಸುಂಕ ವಸೂಲಿ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗುತ್ತೇವೆ. ವ್ಯಾಪಾರ ವಹಿವಾಟು ಹೆಚ್ಚಾದಲ್ಲಿ ಸ್ಥಳೀಯ ರೈತರಿಗೆ ಅನುಕೂಲವಾಗುವುದು– ಜಗದೀಶ್ ಬಾಬು