<p>ಪಾವಗಡ: ಹಮಾಲಿ ಕಾರ್ಮಿಕರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಸೋಮವಾರ ತಹಶೀಲ್ದಾರ್ ಡಿ.ಎನ್.ವರದರಾಜು ಅವರಿಗೆ ಮನವಿ ಸಲ್ಲಿಸಿದರು.</p>.<p>ಶ್ರಮದಾಯಕ ಕೆಲಸ ನಿರ್ವಹಿಸುವ ಹಮಾಲಿಗಳ ಬದುಕು ಸುಧಾರಿಸಬೇಕಿದೆ. ಕೊನೆಗಾಲದಲ್ಲಿ ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗುವ ಹಮಾಲಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಕಾರ್ಮಿಕರು ಮನವಿ ಮಾಡಿದರು.</p>.<p>ಕಾರ್ಮಿಕರ ಭವಿಷ್ಯನಿಧಿ,ಪಿಂಚಣಿ, ವಸತಿ ಯೋಜನೆ ಜಾರಿ ಮಾಡುವುದು ಅಗತ್ಯವಾಗಿದೆ. ಸಹಜ ಮರಣಕ್ಕೂ ₹1ಲಕ್ಷ ಪರಿಹಾರ ನೀಡಬೇಕು. ಶವ ಸಂಸ್ಕಾರ ಪರಿಹಾರ ಮೊತ್ತವನ್ನು ₹25ಸಾವಿರಕ್ಕೆ ಹೆಚ್ಚಿಸಬೇಕು. ಭವಿಷ್ಯನಿಧಿ ಯೋಜನೆ ಸೂಕ್ತ ಪಿಂಚಣಿ ಯೋಜನೆ ಜಾರಿಮಾಡಬೇಕು. ನಿವೃತ್ತಿ ಸಂಚಾರ ಮೊತ್ತ ನೀಡಬೇಕು. ಮರಣ ಪರಿಹಾರ ₹2ಲಕ್ಷಕ್ಕೆ ಹೆಚ್ಚಿಸಬೇಕು. ಎಲ್ಲ ಕಾರ್ಮಿಕರಿಗೆ ಕಡ್ಡಾಯವಾಗಿ ಕಾರ್ಮಿಕ ಕಾನೂನು ಜಾರಿಯಾಗುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.</p>.<p>ಎಪಿಎಂಸಿ ಹಮಾಲಿ ಸಂಘದ ಕಾರ್ಯದರ್ಶಿ ಒ.ನಾಗರಾಜು, ಬಸ್ ನಿಲ್ದಾಣ ಹಮಾಲಿ ಸಂಘದ ಕಾರ್ಯದರ್ಶಿ ಮದ್ಲೇಟಪ್ಪ, ನಾಗರಾಜು, ಗಂಗಾಧರ್, ರಾಮಾಂಜಿನಪ್ಪ, ರಾಜು, ಹನುಮಂತರಾಯ, ರಮೇಶ್ ರಸೂಲ್ ಸಾಬ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಾವಗಡ: ಹಮಾಲಿ ಕಾರ್ಮಿಕರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಸೋಮವಾರ ತಹಶೀಲ್ದಾರ್ ಡಿ.ಎನ್.ವರದರಾಜು ಅವರಿಗೆ ಮನವಿ ಸಲ್ಲಿಸಿದರು.</p>.<p>ಶ್ರಮದಾಯಕ ಕೆಲಸ ನಿರ್ವಹಿಸುವ ಹಮಾಲಿಗಳ ಬದುಕು ಸುಧಾರಿಸಬೇಕಿದೆ. ಕೊನೆಗಾಲದಲ್ಲಿ ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗುವ ಹಮಾಲಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಕಾರ್ಮಿಕರು ಮನವಿ ಮಾಡಿದರು.</p>.<p>ಕಾರ್ಮಿಕರ ಭವಿಷ್ಯನಿಧಿ,ಪಿಂಚಣಿ, ವಸತಿ ಯೋಜನೆ ಜಾರಿ ಮಾಡುವುದು ಅಗತ್ಯವಾಗಿದೆ. ಸಹಜ ಮರಣಕ್ಕೂ ₹1ಲಕ್ಷ ಪರಿಹಾರ ನೀಡಬೇಕು. ಶವ ಸಂಸ್ಕಾರ ಪರಿಹಾರ ಮೊತ್ತವನ್ನು ₹25ಸಾವಿರಕ್ಕೆ ಹೆಚ್ಚಿಸಬೇಕು. ಭವಿಷ್ಯನಿಧಿ ಯೋಜನೆ ಸೂಕ್ತ ಪಿಂಚಣಿ ಯೋಜನೆ ಜಾರಿಮಾಡಬೇಕು. ನಿವೃತ್ತಿ ಸಂಚಾರ ಮೊತ್ತ ನೀಡಬೇಕು. ಮರಣ ಪರಿಹಾರ ₹2ಲಕ್ಷಕ್ಕೆ ಹೆಚ್ಚಿಸಬೇಕು. ಎಲ್ಲ ಕಾರ್ಮಿಕರಿಗೆ ಕಡ್ಡಾಯವಾಗಿ ಕಾರ್ಮಿಕ ಕಾನೂನು ಜಾರಿಯಾಗುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.</p>.<p>ಎಪಿಎಂಸಿ ಹಮಾಲಿ ಸಂಘದ ಕಾರ್ಯದರ್ಶಿ ಒ.ನಾಗರಾಜು, ಬಸ್ ನಿಲ್ದಾಣ ಹಮಾಲಿ ಸಂಘದ ಕಾರ್ಯದರ್ಶಿ ಮದ್ಲೇಟಪ್ಪ, ನಾಗರಾಜು, ಗಂಗಾಧರ್, ರಾಮಾಂಜಿನಪ್ಪ, ರಾಜು, ಹನುಮಂತರಾಯ, ರಮೇಶ್ ರಸೂಲ್ ಸಾಬ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>