ಈ ಹಿಂದಿನ ಆಯುಕ್ತರು ನಮ್ಮ ವಾಸಕ್ಕೆ ಮತ್ತು ಹಂದಿ ಸಾಕಾಣಿಕೆಗೆ ಅಣ್ಣೇನಹಳ್ಳಿ, ಅಜ್ಜಗೊಂಡನಹಳ್ಳಿ ಬಳಿ ಜಮೀನು ಗುರುತಿಸಿದ್ದರು. ಅಣ್ಣೇನಹಳ್ಳಿಯಲ್ಲಿ ಹಂದಿ ಜೋಗಿಗಳ ವಾಸಕ್ಕೆ ಮತ್ತು ಅಜ್ಜಗೊಂಡನಹಳ್ಳಿ ಬಳಿ ಹಂದಿ ಸಾಕಾಣಿಕೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.