ಹೋರಾಟ ಸುಮಾರು 64 ದಿನಗಳ ಕಾಲ ನಿರಂತರವಾಗಿ ನಡೆದಿತ್ತು. ರೈತಸಂಘ ಹಾಗೂ ಸಂಘಸಂಸ್ಥೆಗಳ ಜತೆ ವಿವಿಧ ಮಠಾಧೀಶರು ಕೈ ಜೋಡಿಸಿ ಹೋರಾಟಕ್ಕೆ ಬಲ ತುಂಬಿದ್ದರು. ಆಗ ಶಾಸಕರಾಗಿದ್ದ ಸಿ.ಬಿ.ಸುರೇಶ್ಬಾಬು ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಹೋರಾಟದ ಭಾಗವಾದರು. ಅಂದು ಬಿ.ಎಸ್.ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಿಗೆ ತೀರಾ ಆಪ್ತರಾಗಿದ್ದ ಕಿರಣ್ಕುಮಾರ್ ನೀರಾವರಿ ಯೋಜನೆ ಸಕಾರಗೊಳಿಸುವಂತೆ ಒತ್ತಡ ಹೇರಿದ್ದರು. ಶಾಸಕರಾಗಿದ್ದ ಸುರೇಶ್ಬಾಬು ಸಹ ಸ್ವಾಮೀಜಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಕರೆದೊಯ್ದು ಮುಖ್ಯಮಂತ್ರಿಗಳಲ್ಲಿ ಒತ್ತಡ ಹೇರಿದ್ದರು.