<p><strong>ತುಮಕೂರು: </strong>ಸರಳವಾಗಿ ಬದುಕಿ ಇತರರಿಗೆ ಮಾದರಿಯಾದ ಡಾ.ಎಚ್.ನರಸಿಂಹಯ್ಯ ಅವರು ಕಂದಾಚಾರಗಳ ವಿರುದ್ಧ ಪ್ರಬಲ ಧ್ವನಿ ಎತ್ತಿದರು. ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು ಎಂಬ ಸಂದೇಶ ಸಾರಿದ ನಾಡಿನ ಶ್ರೇಷ್ಠ ಗಾಂಧಿವಾದಿ ಎಂದು ಪರಿಸರ ಹೋರಾಟಗಾರ ಸಿ.ಯತಿರಾಜು ತಿಳಿಸಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ ಆಯೋಜಿಸಿದ್ದ ಡಾ.ಎಚ್.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಗಾಂಧೀಜಿ ಅವರ ಆದರ್ಶಗಳನ್ನು ಪರಿಪಾಲಿಸಿದವರು ವಿರಳ. ಡಾ.ಎಚ್.ಎನ್. ಎಂದೂ ಗಾಂಧಿ ತತ್ವಗಳಿಗೆ ವಿರುದ್ಧ ನಡೆಯಲಿಲ್ಲ. ನರಸಿಂಹಯ್ಯ ಅವರು ಬೆಳೆದ ಹಾದಿ ಅತ್ಯಂತ ಕಷ್ಟವಾದುದು ಎಂದು, ನರಸಿಂಹಯ್ಯ ಅವರ ಬದುಕಿನ ಘಟನೆಗಳನ್ನು ಸ್ಮರಿಸಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಸಾಮಾನ್ಯ ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ಮೌಢ್ಯದ ವಿರುದ್ಧ ಪ್ರಶ್ನಿಸುವುದನ್ನು ಕಲಿಸಿದವರು ಡಾ.ಎಚ್.ನರಸಿಂಹಯ್ಯ. ಇಂತಹವರನ್ನು ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.</p>.<p>ಇಂದು ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನವೂ ಆಗಿದೆ. ಸಣ್ಣ ಕಥಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.</p>.<p>ರಾಕ್ಲೈನ್ ರವಿಕುಮಾರ್, ರಾಣಿ ಚಂದ್ರಶೇಖರ್, ಮಂಜುಳಾದೇವಿ, ಪಂಡಿತ್ ಜವಾಹರ್,ಪುಷ್ಪರಂಗನಾಥ್, ಪಾರ್ವತಮ್ಮ ರಾಜಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಸರಳವಾಗಿ ಬದುಕಿ ಇತರರಿಗೆ ಮಾದರಿಯಾದ ಡಾ.ಎಚ್.ನರಸಿಂಹಯ್ಯ ಅವರು ಕಂದಾಚಾರಗಳ ವಿರುದ್ಧ ಪ್ರಬಲ ಧ್ವನಿ ಎತ್ತಿದರು. ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು ಎಂಬ ಸಂದೇಶ ಸಾರಿದ ನಾಡಿನ ಶ್ರೇಷ್ಠ ಗಾಂಧಿವಾದಿ ಎಂದು ಪರಿಸರ ಹೋರಾಟಗಾರ ಸಿ.ಯತಿರಾಜು ತಿಳಿಸಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ ಆಯೋಜಿಸಿದ್ದ ಡಾ.ಎಚ್.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಗಾಂಧೀಜಿ ಅವರ ಆದರ್ಶಗಳನ್ನು ಪರಿಪಾಲಿಸಿದವರು ವಿರಳ. ಡಾ.ಎಚ್.ಎನ್. ಎಂದೂ ಗಾಂಧಿ ತತ್ವಗಳಿಗೆ ವಿರುದ್ಧ ನಡೆಯಲಿಲ್ಲ. ನರಸಿಂಹಯ್ಯ ಅವರು ಬೆಳೆದ ಹಾದಿ ಅತ್ಯಂತ ಕಷ್ಟವಾದುದು ಎಂದು, ನರಸಿಂಹಯ್ಯ ಅವರ ಬದುಕಿನ ಘಟನೆಗಳನ್ನು ಸ್ಮರಿಸಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಸಾಮಾನ್ಯ ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ಮೌಢ್ಯದ ವಿರುದ್ಧ ಪ್ರಶ್ನಿಸುವುದನ್ನು ಕಲಿಸಿದವರು ಡಾ.ಎಚ್.ನರಸಿಂಹಯ್ಯ. ಇಂತಹವರನ್ನು ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.</p>.<p>ಇಂದು ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನವೂ ಆಗಿದೆ. ಸಣ್ಣ ಕಥಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.</p>.<p>ರಾಕ್ಲೈನ್ ರವಿಕುಮಾರ್, ರಾಣಿ ಚಂದ್ರಶೇಖರ್, ಮಂಜುಳಾದೇವಿ, ಪಂಡಿತ್ ಜವಾಹರ್,ಪುಷ್ಪರಂಗನಾಥ್, ಪಾರ್ವತಮ್ಮ ರಾಜಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>