<p><strong>ಹುಳಿಯಾರು</strong>: ಪಟ್ಟಣದ ಕಸ ವಿಲೇವಾರಿ ಘಟಕ ಸ್ಥಾಪನೆ ಸೇರಿದಂತೆ ಮೂಲ ಸೌಕರ್ಯಗಳನ್ನು ಸ್ಥಳೀಯ ಆಡಳಿತ ಒದಗಿಸದಿರುವುದನ್ನು ವಿರೋಧಿಸಿ ರಾಜ್ಯ ರೈತಸಂಘ (ಹೊಸಹಳ್ಳಿ ಚಂದ್ರಣ್ಣ ಬಣ) ಪ.ಪಂ ಕಚೇರಿ ಮುಂದೆ ನಡೆಸುತ್ತಿರುವ ಸತ್ಯಾಗ್ರಹ ಬುಧವಾರ 72ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿದಿನ ಏಕವ್ಯಕ್ತಿ ಉಪವಾಸ ಬುಧವಾರ 5ನೇ ದಿನಕ್ಕೆ ಕಾಲಿಟ್ಟಿದೆ.</p>.<p>ಕಳೆದ ಶನಿವಾರದಿಂದ ಏಕವ್ಯಕ್ತಿ ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ. ಮೊದಲ ದಿನ ರೈತಸಂಘದ ಅಧ್ಯಕ್ಷ ಚಂದ್ರಣ್ಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಸೀಗೆಬಾಗಿ ಗ್ರಾಮದ ಆಟೊಚಾಲಕ ಮಂಜುನಾಥ್, ಹುಳಿಯಾರು ಪಟ್ಟಣದ ಶಂಕರಪುರ ನಿವಾಸಿ ರತ್ನಮ್ಮ ಮತ್ತಿತರರು ಸರದಿಯಾಗಿ ಉಪವಾಸ ಕೈಗೊಂಡಿದ್ದರು.</p>.<p>ಬುಧವಾರ ಹೊನ್ನಮ್ಮ ಸರದಿಯಂತೆ ಉಪವಾಸ ನಡೆಸಿದರು. ಪ್ರತಿದಿನ ಒಬ್ಬೊಬ್ಬರು ಉಪವಾಸ ಸತ್ಯಾಗ್ರಹ ನಡೆಸಲಿದ್ದು ಹೀಗೆ ಮುಂದೆ 365 ದಿನವಾದರೂ ನಮ್ಮ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಚಂದ್ರಣ್ಣ ತಿಳಿಸಿದರು.</p>
<p><strong>ಹುಳಿಯಾರು</strong>: ಪಟ್ಟಣದ ಕಸ ವಿಲೇವಾರಿ ಘಟಕ ಸ್ಥಾಪನೆ ಸೇರಿದಂತೆ ಮೂಲ ಸೌಕರ್ಯಗಳನ್ನು ಸ್ಥಳೀಯ ಆಡಳಿತ ಒದಗಿಸದಿರುವುದನ್ನು ವಿರೋಧಿಸಿ ರಾಜ್ಯ ರೈತಸಂಘ (ಹೊಸಹಳ್ಳಿ ಚಂದ್ರಣ್ಣ ಬಣ) ಪ.ಪಂ ಕಚೇರಿ ಮುಂದೆ ನಡೆಸುತ್ತಿರುವ ಸತ್ಯಾಗ್ರಹ ಬುಧವಾರ 72ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿದಿನ ಏಕವ್ಯಕ್ತಿ ಉಪವಾಸ ಬುಧವಾರ 5ನೇ ದಿನಕ್ಕೆ ಕಾಲಿಟ್ಟಿದೆ.</p>.<p>ಕಳೆದ ಶನಿವಾರದಿಂದ ಏಕವ್ಯಕ್ತಿ ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ. ಮೊದಲ ದಿನ ರೈತಸಂಘದ ಅಧ್ಯಕ್ಷ ಚಂದ್ರಣ್ಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಸೀಗೆಬಾಗಿ ಗ್ರಾಮದ ಆಟೊಚಾಲಕ ಮಂಜುನಾಥ್, ಹುಳಿಯಾರು ಪಟ್ಟಣದ ಶಂಕರಪುರ ನಿವಾಸಿ ರತ್ನಮ್ಮ ಮತ್ತಿತರರು ಸರದಿಯಾಗಿ ಉಪವಾಸ ಕೈಗೊಂಡಿದ್ದರು.</p>.<p>ಬುಧವಾರ ಹೊನ್ನಮ್ಮ ಸರದಿಯಂತೆ ಉಪವಾಸ ನಡೆಸಿದರು. ಪ್ರತಿದಿನ ಒಬ್ಬೊಬ್ಬರು ಉಪವಾಸ ಸತ್ಯಾಗ್ರಹ ನಡೆಸಲಿದ್ದು ಹೀಗೆ ಮುಂದೆ 365 ದಿನವಾದರೂ ನಮ್ಮ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಚಂದ್ರಣ್ಣ ತಿಳಿಸಿದರು.</p>