ತುಮಕೂರು: ಶ್ರಾವಣ ಸಂಜೆಯಲಿ ಆ ನೃತ್ಯ ವೈಭವ ಕಂಡ ಕಲಾಪ್ರಿಯರು ಚಪ್ಪಾಳೆಯ ಸುರಿಮಳೆ ಗರೆದರು. ಹೆಜ್ಜೆಯ ತಾಳಕ್ಕೆ ಗೆಜ್ಜೆಯ ಮೇಳಕ್ಕೆ ನಾಟ್ಯ ಪ್ರವೀಣೆಯರ ನೃತ್ಯ ಜನಮನ ಸೂರೆಗೊಂಡಿತು.
ಇದು ಶನಿವಾರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಬಾಲಾ ವಿಶ್ವನಾಥ್ ಅವರ ಶಿಷ್ಯವೃಂದದವರ ಪ್ರದರ್ಶಿಸಿದ ನೃತ್ಯ ರೂಪಕದಲ್ಲಿ ಕಂಡ ನೋಟ.
ನಟರಾಜನನ್ನು ಸ್ತುತಿಸುವ ನಟೇಶ ಕೌತುತ ಎಂಬ ನೃತ್ಯದಿಂದ ಪ್ರಾರಂಭ ಮಾಡಿದರು. ಕೃಷ್ಣನ ಲೀಲೆಗಳಲ್ಲಿ ಒಂದಾದ ಕಾಳಿಂಗ ಮರ್ಧನ ರೂಪಕ, ಕಂಸ ಸಂಹಾರ, ಶಾರದೆ, ಜಯ ದುರ್ಗೆ ನೃತ್ಯ ರೂಪಕಗಳು ಗಮನ ಸೆಳೆದವು.