<p><strong>ಕುಣಿಗಲ್: </strong>ತಾಲ್ಲೂಕಿನ ಕೊಪ್ಪ ಗ್ರಾಮದ ರಂಗಯ್ಯ ಅವರ 45 ವರ್ಷಗಳ ಜಾನಪದ ಕ್ಷೇತ್ರದ ಸಾಧನೆಗೆ 2019 ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದಿದೆ.</p>.<p>ಕೊಪ್ಪ ಗ್ರಾಮದ ದೊಡ್ಡಮ್ಮ, ಮಾಯಣ್ಣ ದಂಪತಿಯ ಪುತ್ರರಾದ ರಂಗಯ್ಯ ಓದಿದ್ದೂ ಕೇವಲ 2ನೇ ತರಗತಿ. ತಂದೆ ಮಾಯಣ್ಣ ಕೃಷಿಕರು. ಶನೇಶ್ವರಸ್ವಾಮಿಯ ಹರಿಕಥೆ ಮಾಡುವುದರಲ್ಲಿ ಪ್ರಾವೀಣ್ಯ ಪಡೆದಿದ್ದರು. ತಂದೆಯ ಜತೆಯಲ್ಲಿ ಭಾಗವಹಿಸುತ್ತಾ ರಂಗಯ್ಯ ಅವರು ಹರಿಕಥೆಯನ್ನು ಕರಗತ ಮಾಡಿಕೊಂಡರು.</p>.<p>ಗ್ರಾಮೀಣ ಭಾಗದ ಜಾನಪದ ಕಲಾವಿದರ ಒಡನಾಟದಿಂದ ಜಾನಪದ, ಭಕ್ತಿ, ನಾಟಕಗಳ ಕಂದಪದ್ಯಗಳನ್ನು ಕಂಠಪಾಠ ಮಾಡುತ್ತಲೇ ನೂರಾರು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತ ಕಲೆಯನ್ನು ಒಲಿಸಿಕೊಂಡರು.</p>.<p>1975ರಿಂದ ಬೆಂಗಳೂರಿನಲ್ಲಿ ನೆಲಸಿದ ರಂಗಯ್ಯನವರು ಕೆಇಬಿಯಲ್ಲಿ ಲೈನ್ಮೆನ್ ಹುದ್ದೆಯಲ್ಲಿದ್ದರು. ಆದರೂ ಜಾನಪದ ಕಲೆಯಲ್ಲಿ ಸಕ್ರಿಯರಾಗಿದ್ದರು. ಸುಮಾರು 200 ಜಾನಪದ ಉತ್ಸವದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಗಡಿನಾಡು, ಸೇವಾರತ್ನ, ಕೇರಳದ ಬಾಬು ಜಗಜೀವನ್ ರಾಮ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.</p>.<p>ವೃತ್ತಿಯಿಂದ ನಿವೃತ್ತಿಯಾದರೂ, ಪ್ರವೃತ್ತಿಯಿಂದ ನಿವೃತ್ತಿಯಾಗದೆ ಜಾನಪದ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ರಂಗಯ್ಯನವರ ಉತ್ಸಾಹ ಇನ್ನೂ ಬತ್ತಿಲ್ಲ. ನೂರಾರು ಜನಪದ ಗೀತೆಗಳನ್ನು ತಮ್ಮ ಮಸ್ತಕದಲ್ಲಿ ಕಾಪಿಟ್ಟುಕೊಂಡಿದ್ದಾರೆ. ಇನ್ನೂರಕ್ಕೂ ಹೆಚ್ಚು ಜನಪದ ಗೀತೆಗಳನ್ನು ರಚಿಸಿ, ತಮ್ಮ ಮಕ್ಕಳ ಕೈಯಲ್ಲಿ ಬರೆದು ಭದ್ರಪಡಿಸಿದ್ದಾರೆ.</p>.<p>‘ನಮ್ಮ ತಂದೆ ಬರೆದಿರುವ ಗೀತೆಗಳನ್ನು ತಿದ್ದಿ ಸರಿಪಡಿಸಿ ಪುಸ್ತಕ ರೂಪದಲ್ಲಿ ಸಂಗ್ರಹಿಸಿದ್ದೇವೆ’ ಎನ್ನುವರು ಅವರ ಪುತ್ರ ರಂಗನಾಥ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್: </strong>ತಾಲ್ಲೂಕಿನ ಕೊಪ್ಪ ಗ್ರಾಮದ ರಂಗಯ್ಯ ಅವರ 45 ವರ್ಷಗಳ ಜಾನಪದ ಕ್ಷೇತ್ರದ ಸಾಧನೆಗೆ 2019 ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದಿದೆ.</p>.<p>ಕೊಪ್ಪ ಗ್ರಾಮದ ದೊಡ್ಡಮ್ಮ, ಮಾಯಣ್ಣ ದಂಪತಿಯ ಪುತ್ರರಾದ ರಂಗಯ್ಯ ಓದಿದ್ದೂ ಕೇವಲ 2ನೇ ತರಗತಿ. ತಂದೆ ಮಾಯಣ್ಣ ಕೃಷಿಕರು. ಶನೇಶ್ವರಸ್ವಾಮಿಯ ಹರಿಕಥೆ ಮಾಡುವುದರಲ್ಲಿ ಪ್ರಾವೀಣ್ಯ ಪಡೆದಿದ್ದರು. ತಂದೆಯ ಜತೆಯಲ್ಲಿ ಭಾಗವಹಿಸುತ್ತಾ ರಂಗಯ್ಯ ಅವರು ಹರಿಕಥೆಯನ್ನು ಕರಗತ ಮಾಡಿಕೊಂಡರು.</p>.<p>ಗ್ರಾಮೀಣ ಭಾಗದ ಜಾನಪದ ಕಲಾವಿದರ ಒಡನಾಟದಿಂದ ಜಾನಪದ, ಭಕ್ತಿ, ನಾಟಕಗಳ ಕಂದಪದ್ಯಗಳನ್ನು ಕಂಠಪಾಠ ಮಾಡುತ್ತಲೇ ನೂರಾರು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತ ಕಲೆಯನ್ನು ಒಲಿಸಿಕೊಂಡರು.</p>.<p>1975ರಿಂದ ಬೆಂಗಳೂರಿನಲ್ಲಿ ನೆಲಸಿದ ರಂಗಯ್ಯನವರು ಕೆಇಬಿಯಲ್ಲಿ ಲೈನ್ಮೆನ್ ಹುದ್ದೆಯಲ್ಲಿದ್ದರು. ಆದರೂ ಜಾನಪದ ಕಲೆಯಲ್ಲಿ ಸಕ್ರಿಯರಾಗಿದ್ದರು. ಸುಮಾರು 200 ಜಾನಪದ ಉತ್ಸವದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಗಡಿನಾಡು, ಸೇವಾರತ್ನ, ಕೇರಳದ ಬಾಬು ಜಗಜೀವನ್ ರಾಮ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.</p>.<p>ವೃತ್ತಿಯಿಂದ ನಿವೃತ್ತಿಯಾದರೂ, ಪ್ರವೃತ್ತಿಯಿಂದ ನಿವೃತ್ತಿಯಾಗದೆ ಜಾನಪದ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ರಂಗಯ್ಯನವರ ಉತ್ಸಾಹ ಇನ್ನೂ ಬತ್ತಿಲ್ಲ. ನೂರಾರು ಜನಪದ ಗೀತೆಗಳನ್ನು ತಮ್ಮ ಮಸ್ತಕದಲ್ಲಿ ಕಾಪಿಟ್ಟುಕೊಂಡಿದ್ದಾರೆ. ಇನ್ನೂರಕ್ಕೂ ಹೆಚ್ಚು ಜನಪದ ಗೀತೆಗಳನ್ನು ರಚಿಸಿ, ತಮ್ಮ ಮಕ್ಕಳ ಕೈಯಲ್ಲಿ ಬರೆದು ಭದ್ರಪಡಿಸಿದ್ದಾರೆ.</p>.<p>‘ನಮ್ಮ ತಂದೆ ಬರೆದಿರುವ ಗೀತೆಗಳನ್ನು ತಿದ್ದಿ ಸರಿಪಡಿಸಿ ಪುಸ್ತಕ ರೂಪದಲ್ಲಿ ಸಂಗ್ರಹಿಸಿದ್ದೇವೆ’ ಎನ್ನುವರು ಅವರ ಪುತ್ರ ರಂಗನಾಥ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>