ಕ್ಷೇತ್ರದಲ್ಲಿ ಬಿಜೆಪಿ ನಾಲ್ಕು ರ್ಯಾಲಿ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದರೂ ಕೊಬ್ಬರಿಗೆ ಪ್ರೋತ್ಸಾಹ ಬೆಲೆ, ಬೆಂಬಲ ಬೆಲೆ ಏರಿಕೆ ಬಗ್ಗೆ ಕಿಂಚಿತ್ತೂ ಮಾತನಾಡಿರಲಿಲ್ಲ. ತಾಲ್ಲೂಕಿನ ರೈತರು ಕೊಬ್ಬರಿ ಬೆಲೆ ಏರಿಕೆಗಾಗಿ 35 ದಿನ ಪ್ರತಿಭಟನೆ ನಡೆಸಿದರೂ ಜಿಲ್ಲೆಯ ಇಬ್ಬರು ಸಚಿವರು (ಬಿ.ಸಿ.ನಾಗೇಶ್, ಜೆ.ಸಿ.ಮಾಧುಸ್ವಾಮಿ) ಪ್ರತಿಭಟನಾ ಸ್ಥಳಕ್ಕೆ ಬರದೆ ರೈತರ ಕೆಂಗಣ್ಣಿಗೆ ಗುರಿಯಾಗಿದ್ದರು.