<p><strong>ತುಮಕೂರು</strong>:‘ಕೆಂಪೇಗೌಡ ಕೇವಲ ಬೆಂಗಳೂರು ನಗರಕ್ಕೆ ಸೀಮಿತರಾದವರಲ್ಲ. ರಾಷ್ಟ್ರದ ಮಹನೀಯರಲ್ಲಿ ಪ್ರಮುಖರು’ ಎಂದು ಜೆಡಿಎಸ್ ಮುಖಂಡ ನರಸೇಗೌಡ ಹೇಳಿದರು.</p>.<p>ನಗರದ ಬಿಜಿಎಸ್ ವೃತ್ತದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ನಡೆಯಿತು. ಬೆಂಗಳೂರು ಕಟ್ಟಿದ ಕೆಂಪೇಗೌಡ ಅವರ ಸಾಧನೆಯನ್ನು ಸ್ಮರಿಸಿದರು.</p>.<p>ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್, ‘ಕೆಂಪೇಗೌಡರು ರಾಜಮನೆತನದಲ್ಲಿ ಹುಟ್ಟಿ ಬೆಳೆದರೂ ಬಡವರ ಏಳಿಗೆಗೆ ಬಹಳಷ್ಟು ಶ್ರಮಿಸಿದ್ದರು. ಬಡವರು, ರೈತರ ಪಾಲಿಗೆ ಸದಾ ಅಜರಾಮರ. ಬೆಂಗಳೂರಿನಂತಹ ಬೃಹತ್ ನಗರ ಕಟ್ಟಿ ಬೆಳೆಸಿದವರಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ’<br />ಎಂದು ಹೇಳಿದರು.</p>.<p>ಅಂದಿನ ಕಾಲದಲ್ಲೇ ಕೋಟೆಗಳು, ಕೆರೆ– ಕಟ್ಟೆಗಳನ್ನು ನಿರ್ಮಿಸಿದ್ದು, ರೈತರ ಪಾಲಿಗೆ ಆಶಾಕಿರಣದಂತೆ ಇದ್ದರು. ಅವರ ಜಯಂತಿಯನ್ನು ಪ್ರತಿಯೊಬ್ಬರೂ ಆಚರಿಸುವಂತಾಗಬೇಕು ಎಂದು ಸಲಹೆ ನೀಡಿದರು.</p>.<p>ಅವರು ಕೇವಲ ಒಂದು ಜಾತಿ, ಸಮುದಾಯಕ್ಕೆ ಮೀಸಲಾದ ವ್ಯಕ್ತಿಯಲ್ಲ. ದೇಶದ ಆಸ್ತಿ ಎಂದರು.</p>.<p>ಸಮುದಾಯದ ಮುಖಂಡರಾದ ದೊಡ್ಡಲಿಂಗಪ್ಪ, ಕುಮಾರ್, ಸಿದ್ದಲಿಂಗೇಗೌಡ, ದೇವಿಕಾ, ಜೆಡಿಎಸ್ ಮುಖಂಡರಾದ ನಾಗರಾಜು, ಶ್ರೀನಾಥ್, ಗಿರೀಶ್, ದಿನೇಶ್, ಕರಿಯಪ್ಪ, ಉರ್ಡಿಗೆರೆ ಗಂಗಾಧರ, ಮಂಜುನಾಥ್, ಲೋಕೇಶ್ ಚಿನಕವಜ್ರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>:‘ಕೆಂಪೇಗೌಡ ಕೇವಲ ಬೆಂಗಳೂರು ನಗರಕ್ಕೆ ಸೀಮಿತರಾದವರಲ್ಲ. ರಾಷ್ಟ್ರದ ಮಹನೀಯರಲ್ಲಿ ಪ್ರಮುಖರು’ ಎಂದು ಜೆಡಿಎಸ್ ಮುಖಂಡ ನರಸೇಗೌಡ ಹೇಳಿದರು.</p>.<p>ನಗರದ ಬಿಜಿಎಸ್ ವೃತ್ತದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ನಡೆಯಿತು. ಬೆಂಗಳೂರು ಕಟ್ಟಿದ ಕೆಂಪೇಗೌಡ ಅವರ ಸಾಧನೆಯನ್ನು ಸ್ಮರಿಸಿದರು.</p>.<p>ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್, ‘ಕೆಂಪೇಗೌಡರು ರಾಜಮನೆತನದಲ್ಲಿ ಹುಟ್ಟಿ ಬೆಳೆದರೂ ಬಡವರ ಏಳಿಗೆಗೆ ಬಹಳಷ್ಟು ಶ್ರಮಿಸಿದ್ದರು. ಬಡವರು, ರೈತರ ಪಾಲಿಗೆ ಸದಾ ಅಜರಾಮರ. ಬೆಂಗಳೂರಿನಂತಹ ಬೃಹತ್ ನಗರ ಕಟ್ಟಿ ಬೆಳೆಸಿದವರಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ’<br />ಎಂದು ಹೇಳಿದರು.</p>.<p>ಅಂದಿನ ಕಾಲದಲ್ಲೇ ಕೋಟೆಗಳು, ಕೆರೆ– ಕಟ್ಟೆಗಳನ್ನು ನಿರ್ಮಿಸಿದ್ದು, ರೈತರ ಪಾಲಿಗೆ ಆಶಾಕಿರಣದಂತೆ ಇದ್ದರು. ಅವರ ಜಯಂತಿಯನ್ನು ಪ್ರತಿಯೊಬ್ಬರೂ ಆಚರಿಸುವಂತಾಗಬೇಕು ಎಂದು ಸಲಹೆ ನೀಡಿದರು.</p>.<p>ಅವರು ಕೇವಲ ಒಂದು ಜಾತಿ, ಸಮುದಾಯಕ್ಕೆ ಮೀಸಲಾದ ವ್ಯಕ್ತಿಯಲ್ಲ. ದೇಶದ ಆಸ್ತಿ ಎಂದರು.</p>.<p>ಸಮುದಾಯದ ಮುಖಂಡರಾದ ದೊಡ್ಡಲಿಂಗಪ್ಪ, ಕುಮಾರ್, ಸಿದ್ದಲಿಂಗೇಗೌಡ, ದೇವಿಕಾ, ಜೆಡಿಎಸ್ ಮುಖಂಡರಾದ ನಾಗರಾಜು, ಶ್ರೀನಾಥ್, ಗಿರೀಶ್, ದಿನೇಶ್, ಕರಿಯಪ್ಪ, ಉರ್ಡಿಗೆರೆ ಗಂಗಾಧರ, ಮಂಜುನಾಥ್, ಲೋಕೇಶ್ ಚಿನಕವಜ್ರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>