ಪಾವಗಡ: ಕಚೇರಿ ಸಮಯದಲ್ಲೇ ಮದ್ಯ ಕುಡಿದು, ಬಿಯರ್ ಬಾಟಲಿಯಿಂದ ಹೊಡೆದಾಡಿಕೊಂಡಿದ್ದ ಪ್ರಕರಣದಲ್ಲಿ ಪಟ್ಟಣದ ಕೆಪಿಟಿಸಿಎಲ್ ಕಚೇರಿಯ ಕಿರಿಯ ಎಂಜಿನಿಯರ್ ವರದರಾಜು ಹಾಗೂ ಮೆಕ್ಯಾನಿಕ್ (ಗ್ರೇಡ್–1) ನರಸಿಂಹಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.
ಗಲಾಟೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಕಿರಿಯ ಎಂಜಿನಿಯರ್ ಶ್ರೀನಿವಾಸ್ ಹಾಗೂ ಮೆಕ್ಯಾನಿಕ್ (ಗ್ರೇಡ್–2) ಎಂ.ಆರ್.ಸಂತೋಷ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಕೆಪಿಟಿಸಿಎಲ್ ತುಮಕೂರು ವಿಭಾಗದ ಸೂಪರಿಂಟೆಂಡಿಂಗ್ ಎಂಜಿನಿಯರ್ ಶುಕ್ರವಾರ ಅಮಾನತು ಆದೇಶ ಹೊರಡಿಸಿದ್ದಾರೆ.
ಕಚೇರಿ ಸಮಯದಲ್ಲೇ ಮದ್ಯ ಸೇವಿಸಿ, ಬಿಯರ್ ಬಾಟಲಿಯಿಂದ ಹೊಡೆದಾಡಿಕೊಂಡಿದ್ದ ಕುರಿತು ‘ಪ್ರಜಾವಾಣಿ’ಯಲ್ಲಿ ಮೇ 30ರಂದು ವರದಿ ಪ್ರಕಟವಾಗಿತ್ತು.