ತಾಲ್ಲೂಕಿನ ಅಮೃತೂರು ಹೋಬಳಿಯ ಗೋವಿಂದರಾಜು ಐದು ಎಕರೆ ಜಮೀನನಲ್ಲಿ ಚೆಂಡು ಹೂ, ಗುಲಾಬಿ ಮತ್ತು ಸುಗಂಧರಾಜ ಹೂವನ್ನು ಬೆಳೆದಿದ್ದರು. ಇನ್ನೇನೂ ಕೆಲದಿನಗಳಲ್ಲಿ ಹೂವುಗಳನ್ನು ಕಿತ್ತು ಮಾರಾಟ ಮಾಡಬೇಕು ಎನ್ನುವ ಸಮಯದಲ್ಲಿ ಲಾಕ್ಡೌನ್ ಘೋಷಣೆಯಾಯಿತು. ಇದರಿಂದ ಹೂವನ್ನು ಮಾರಾಟ ಮಾಡಲಾಗದೆ ಬೇಸತ್ತು ಟ್ರಾಕ್ಟರ್ ಹಾಯಿಸಿ ನಾಶ ಪಡಿಸಿದ್ದಾರೆ.