<p><strong>ಕುಣಿಗಲ್</strong>: ಪಟ್ಟಣದ ಸಿದ್ಧಾರ್ಥ ಕಾಲೊನಿಯ ಅಂಗನವಾಡಿ ಕೇಂದ್ರದ ಬಾಡಿಗೆ ಕಟ್ಟಡಕ್ಕೆ ಎರಡು ವರ್ಷದಿಂದ ಬಾಡಿಗೆ ಪಾವತಿಸದ ಕಾರಣ ಮಾಲೀಕರು ಬುಧವಾರ ಬೀಗ ಹಾಕಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಯೋಗೇಶ್ವರಿ ಅಸಹಾಯಕರಾಗಿದ್ದು, ಕಾರ್ಯನಿರ್ವಹಿಸದಂತಾಗಿದೆ.</p>.<p>ಪಟ್ಟಣದಲ್ಲಿನ 26 ಅಂಗನವಾಡಿ ಕೇಂದ್ರಗಳಲ್ಲಿ 23 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಒಂದು ವರ್ಷದಿಂದ ಬಾಡಿಗೆ ಹಣ ಪಾವತಿಯಾಗಿಲ್ಲ. ಅಂಗನವಾಡಿಗಾಗಿ ಸೂಕ್ತ ಕಟ್ಟಡಗಳನ್ನು ಬಾಡಿಗೆಗೆ ಪಡೆದಿರುವ ಕಾರ್ಯಕರ್ತೆಯರು ಮುಂಗಡ ಹಣವನ್ನು ಸ್ವಂತವಾಗಿ ಭರಿಸಿದ್ದಾರೆ. ಬಾಡಿಗೆಯನ್ನು ಶೀಘ್ರ ಸರ್ಕಾರ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶಾಂತಕುಮಾರಿ ಹೇಳಿದರು</p>.<p>ಕೊರೊನಾದಿಂದಾಗಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿಲ್ಲ. ಆದರೆ ಮಕ್ಕಳು, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ನೀಡಬೇಕಾದ ಆಹಾರಗಳನ್ನು ಸಂಗ್ರಹಿಸಿ ವಿತರಣೆ ಮಾಡಬೇಕಿದೆ. ತಾಯಂದಿರ ಸಭೆ, ಬಾಲವಿಕಾಸ ಸಮಿತಿ ಸಭೆಗಳು ನಡೆಯಬೇಕಿದೆ. ಒಬ್ಬ ಮಾಲೀಕರು ಬಾಡಿಗೆಗಾಗಿ ಬೀಗ ಹಾಕಿದ್ದಾರೆ. ಎಲ್ಲರೂ ಈ ಪ್ರವೃತ್ತಿ ಮುಂದುವರೆಸುವ ಮೊದಲು ಇಲಾಖೆ ಬಾಡಿಗೆ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.</p>.<p>‘ಬಾಡಿಗೆ ದರನಿಗದಿ ಬಗ್ಗೆ ಗೊಂದಲಗಳಿವೆ. ಪರಿಷ್ಕೃತ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದು ಪಾವತಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುಷಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್</strong>: ಪಟ್ಟಣದ ಸಿದ್ಧಾರ್ಥ ಕಾಲೊನಿಯ ಅಂಗನವಾಡಿ ಕೇಂದ್ರದ ಬಾಡಿಗೆ ಕಟ್ಟಡಕ್ಕೆ ಎರಡು ವರ್ಷದಿಂದ ಬಾಡಿಗೆ ಪಾವತಿಸದ ಕಾರಣ ಮಾಲೀಕರು ಬುಧವಾರ ಬೀಗ ಹಾಕಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಯೋಗೇಶ್ವರಿ ಅಸಹಾಯಕರಾಗಿದ್ದು, ಕಾರ್ಯನಿರ್ವಹಿಸದಂತಾಗಿದೆ.</p>.<p>ಪಟ್ಟಣದಲ್ಲಿನ 26 ಅಂಗನವಾಡಿ ಕೇಂದ್ರಗಳಲ್ಲಿ 23 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಒಂದು ವರ್ಷದಿಂದ ಬಾಡಿಗೆ ಹಣ ಪಾವತಿಯಾಗಿಲ್ಲ. ಅಂಗನವಾಡಿಗಾಗಿ ಸೂಕ್ತ ಕಟ್ಟಡಗಳನ್ನು ಬಾಡಿಗೆಗೆ ಪಡೆದಿರುವ ಕಾರ್ಯಕರ್ತೆಯರು ಮುಂಗಡ ಹಣವನ್ನು ಸ್ವಂತವಾಗಿ ಭರಿಸಿದ್ದಾರೆ. ಬಾಡಿಗೆಯನ್ನು ಶೀಘ್ರ ಸರ್ಕಾರ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶಾಂತಕುಮಾರಿ ಹೇಳಿದರು</p>.<p>ಕೊರೊನಾದಿಂದಾಗಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿಲ್ಲ. ಆದರೆ ಮಕ್ಕಳು, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ನೀಡಬೇಕಾದ ಆಹಾರಗಳನ್ನು ಸಂಗ್ರಹಿಸಿ ವಿತರಣೆ ಮಾಡಬೇಕಿದೆ. ತಾಯಂದಿರ ಸಭೆ, ಬಾಲವಿಕಾಸ ಸಮಿತಿ ಸಭೆಗಳು ನಡೆಯಬೇಕಿದೆ. ಒಬ್ಬ ಮಾಲೀಕರು ಬಾಡಿಗೆಗಾಗಿ ಬೀಗ ಹಾಕಿದ್ದಾರೆ. ಎಲ್ಲರೂ ಈ ಪ್ರವೃತ್ತಿ ಮುಂದುವರೆಸುವ ಮೊದಲು ಇಲಾಖೆ ಬಾಡಿಗೆ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.</p>.<p>‘ಬಾಡಿಗೆ ದರನಿಗದಿ ಬಗ್ಗೆ ಗೊಂದಲಗಳಿವೆ. ಪರಿಷ್ಕೃತ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದು ಪಾವತಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುಷಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>