ಕೊರೊನಾದಿಂದಾಗಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿಲ್ಲ. ಆದರೆ ಮಕ್ಕಳು, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ನೀಡಬೇಕಾದ ಆಹಾರಗಳನ್ನು ಸಂಗ್ರಹಿಸಿ ವಿತರಣೆ ಮಾಡಬೇಕಿದೆ. ತಾಯಂದಿರ ಸಭೆ, ಬಾಲವಿಕಾಸ ಸಮಿತಿ ಸಭೆಗಳು ನಡೆಯಬೇಕಿದೆ. ಒಬ್ಬ ಮಾಲೀಕರು ಬಾಡಿಗೆಗಾಗಿ ಬೀಗ ಹಾಕಿದ್ದಾರೆ. ಎಲ್ಲರೂ ಈ ಪ್ರವೃತ್ತಿ ಮುಂದುವರೆಸುವ ಮೊದಲು ಇಲಾಖೆ ಬಾಡಿಗೆ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.