ಕಾರ್ಯಕ್ರಮದಲ್ಲಿ ಮಾತನಾಡಿದ ಸೌಮ್ಯಶ್ರೀ, ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ಕಲಿತಿದ್ದಾರೆ. ಸಂದೇಶಗಳನ್ನು, ಪಠ್ಯ ಕ್ರಮಗಳನ್ನು ಟ್ಯಾಬ್ ಬಳಕೆಯಲ್ಲಿ ಮಾಡುತ್ತಿದ್ದಾರೆ. ಇಲಾಖೆಯ ಆಶಯದಂತೆ ರೈತರು ತಮ್ಮ ಬೆಳೆಗಳ ಸಮೀಕ್ಷೆಯನ್ನು ತಾವೇ ಮಾಡಬೇಕಾಗಿದ್ದು, ಬಹುತೇಕ ರೈತರಿಗೆ ಸಮಸ್ಯೆಯಾಗಿದೆ. ಕೃಷಿ ಇಲಾಖೆಯ ಪ್ರತಿ ಸೌಲಭ್ಯಕ್ಕೂ ಬೆಳೆ ಸಮೀಕ್ಷೆ ವರದಿ ಅಗತ್ಯವಾಗಿದೆ. ಇಂತಹ ಸಮಯದಲ್ಲಿ ಮೊಬೈಲ್ ಬಳಕೆ ಮಾಡುತ್ತಿರುವ ವಿದ್ಯಾರ್ಥಿಗಳು ಬೆಳೆ ಸಮೀಕ್ಷೆ ಮಾಡುವುದರ ಮೂಲಕ ತಮ್ಮ ತಂದೆ ತಾಯಿಯರ ಜಮೀನು ಎಷ್ಟಿದೆ, ಎಲ್ಲಿದೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿಯಾದರೂ ಈ ನೆಪದಲ್ಲಿ ಪಡೆದುಕೊಳ್ಳ
ಬಹುದು. ಇದರಿಂದ ಪೋಷಕರಿಗೂ ಸಹಾಯವಾಗಲಿದೆ ಎಂದರು.