<p><strong>ಕುಣಿಗಲ್:</strong> ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಡಿ.ಕೆ.ಎಸ್ ಚಾರಿಟಬಲ್ ಟ್ರಸ್ಟ್ನಿಂದ ಮೂರು ದಿನ ಕುಣಿಗಲ್ ಉತ್ಸವ ಹಮ್ಮಿಕೊಳ್ಳಲಾಗಿದೆ. ಹತ್ತು ಹಲವು ಕಾರ್ಯಕ್ರಮಗಳಲ್ಲಿ ಅಬಾಲವೃದ್ಧರಾಗಿ ಸಾವಿರಾರು ಮಂದಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಬಹುಮಾನ ಪಡೆದರು.</p>.<p>ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ನಿರ್ಮಿಸಲಾಗಿರುವ ತಿರುಮಲ ತಿರುಪತಿ ಮಾದರಿ ದೇವಾಲಯದ ಮುಂಭಾಗ ಶುಕ್ರವಾರ ಶಾಸಕ ಡಾ.ರಂಗನಾಥ್, ಪತ್ನಿ ಡಾ. ಸುಮಾ ದಂಪತಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.</p>.<p>ಸಮಿತಿ ಕರೆ ಮೇರೆಗೆ ಪಟ್ಟಣದ 23 ವಾರ್ಡ್ಗಳ ಪ್ರತಿ ಮನೆ ಮುಂದೆ ಮಹಿಳೆಯರು ರಂಗುರಂಗಿನ ಚಿತ್ತಾರದ ರಂಗೋಲಿಗಳನ್ನು ಸಂಭ್ರಮದಿಂದ ಬಿಡಿಸಿದ್ದರು. ಶಾಸಕ ಡಾ.ರಂಗನಾಥ್ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಬಹುಮಾನ ವಿತರಿಸಿದರು. ಸಮಿತಿಯಿಂದ ಪ್ರತಿ ಮನೆಗೂ ಬಹುಮಾನ ವಿತರಿಸಲಾಯಿತು.</p>.<p>ತಾಲ್ಲೂಕಿನ ವಿವಿಧೆಡೆಗಳಿಂದ 180 ಗ್ರಾಮ ದೇವತೆಗಳ ಉತ್ಸವಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್ ಚಾಲನೆ ನೀಡಿದ್ದು, ಪ್ರತಿ ದೇವತೆಗೂ ಶಾಸಕರು ಪುಷ್ಪಾರ್ಚನೆ ಮಾಡಿದರು.</p>.<p>ವೇದಿಕೆ ಮುಂಭಾಗದಲ್ಲಿ ನಡೆದ ವಾಯ್ಸ್ ಆಫ್ ಕುಣಿಗಲ್, ಕೊಕ್ಕೊ, ಕಬಡ್ಡಿ, ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ, ಕೇಶ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.</p>.<p>ಬ್ರಹ್ಮಾಂಡ ಗುರೂಜಿ ಮಾತನಾಡಿ, ‘ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ. ಅದು ಸಂಕ್ರಾತಿಯಿಂದ ಯುಗಾದಿವರಗೆ ಮಾತ್ರ. ನಂತರ ಹತ್ತು ವರ್ಷದವರೆಗೂ ಈ ಅವಕಾಶ ಸಿಗುವುದಿಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್:</strong> ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಡಿ.ಕೆ.ಎಸ್ ಚಾರಿಟಬಲ್ ಟ್ರಸ್ಟ್ನಿಂದ ಮೂರು ದಿನ ಕುಣಿಗಲ್ ಉತ್ಸವ ಹಮ್ಮಿಕೊಳ್ಳಲಾಗಿದೆ. ಹತ್ತು ಹಲವು ಕಾರ್ಯಕ್ರಮಗಳಲ್ಲಿ ಅಬಾಲವೃದ್ಧರಾಗಿ ಸಾವಿರಾರು ಮಂದಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಬಹುಮಾನ ಪಡೆದರು.</p>.<p>ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ನಿರ್ಮಿಸಲಾಗಿರುವ ತಿರುಮಲ ತಿರುಪತಿ ಮಾದರಿ ದೇವಾಲಯದ ಮುಂಭಾಗ ಶುಕ್ರವಾರ ಶಾಸಕ ಡಾ.ರಂಗನಾಥ್, ಪತ್ನಿ ಡಾ. ಸುಮಾ ದಂಪತಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.</p>.<p>ಸಮಿತಿ ಕರೆ ಮೇರೆಗೆ ಪಟ್ಟಣದ 23 ವಾರ್ಡ್ಗಳ ಪ್ರತಿ ಮನೆ ಮುಂದೆ ಮಹಿಳೆಯರು ರಂಗುರಂಗಿನ ಚಿತ್ತಾರದ ರಂಗೋಲಿಗಳನ್ನು ಸಂಭ್ರಮದಿಂದ ಬಿಡಿಸಿದ್ದರು. ಶಾಸಕ ಡಾ.ರಂಗನಾಥ್ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಬಹುಮಾನ ವಿತರಿಸಿದರು. ಸಮಿತಿಯಿಂದ ಪ್ರತಿ ಮನೆಗೂ ಬಹುಮಾನ ವಿತರಿಸಲಾಯಿತು.</p>.<p>ತಾಲ್ಲೂಕಿನ ವಿವಿಧೆಡೆಗಳಿಂದ 180 ಗ್ರಾಮ ದೇವತೆಗಳ ಉತ್ಸವಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್ ಚಾಲನೆ ನೀಡಿದ್ದು, ಪ್ರತಿ ದೇವತೆಗೂ ಶಾಸಕರು ಪುಷ್ಪಾರ್ಚನೆ ಮಾಡಿದರು.</p>.<p>ವೇದಿಕೆ ಮುಂಭಾಗದಲ್ಲಿ ನಡೆದ ವಾಯ್ಸ್ ಆಫ್ ಕುಣಿಗಲ್, ಕೊಕ್ಕೊ, ಕಬಡ್ಡಿ, ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ, ಕೇಶ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.</p>.<p>ಬ್ರಹ್ಮಾಂಡ ಗುರೂಜಿ ಮಾತನಾಡಿ, ‘ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ. ಅದು ಸಂಕ್ರಾತಿಯಿಂದ ಯುಗಾದಿವರಗೆ ಮಾತ್ರ. ನಂತರ ಹತ್ತು ವರ್ಷದವರೆಗೂ ಈ ಅವಕಾಶ ಸಿಗುವುದಿಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>