ಮಳೆ ಬಂದರೆ ರಾಗಿ ಬಿತ್ತನೆಗೆ ಇನ್ನೂ ಅವಕಾಶವಿದ್ದು ರೈತರು ಆತಂಕ ಪಡಬೇಕಿಲ್ಲ. ಮಳೆ ಬಾರದಿದ್ದರೆ ಆಹಾರ ಧಾನ್ಯಗಳ ಬಿತ್ತನೆಯಲ್ಲಿ ನಿಗದಿತ ಗುರಿ ತಲುಪಲು ಸಾಧ್ಯವಾಗದೆ ಕೊರತೆ ಎದುರಿಸಬೇಕಾಗುತ್ತದೆ.
ಜಗನ್ನಾಥ ಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಕೊಳವೆ ಬಾವಿಗಳಲ್ಲಿ ಸ್ವಲ್ಪ ನೀರು ಬರುತ್ತಿದ್ದರೂ ಅಸಮರ್ಪಕ ವಿದ್ಯುತ್ ಸರಬರಾಜಿನಿಂದಾಗಿ ತೊಂದರೆಯಾಗಿದೆ. ಯಾವಾಗ ವಿದ್ಯುತ್ ತೆಗೆಯುವರೊ ತಿಳಿಯುತ್ತಿಲ್ಲ. ದೂರದ ಹೊಲಗಳ ಬಳಿ ರಾತ್ರಿ ಹೋಗಲು ಕಾಡುಪ್ರಾಣಿ ಭಯವಿದೆ.