<p><strong>ತುಮಕೂರು:</strong> ತಾಲ್ಲೂಕಿನ ಕೈದಾಳ, ಬೈರಸಂದ್ರ, ಗೊಲ್ಲರಹಟ್ಟಿ, ಚೋಳಂಬಳ್ಳಿ ಗ್ರಾಮಗಳಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಸುರೇಶ್ಗೌಡ ಭೂಮಿ ಪೂಜೆ ನೆರವೇರಿಸಿದರು.</p>.<p>‘ಸಿ.ಸಿ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿಗಾಗಿ ₹5 ಕೋಟಿ ವ್ಯಯಿಸಲಾಗುತ್ತಿದೆ. ಗೂಳೂರು– ಕೈದಾಳ ರಸ್ತೆ ನಿರ್ಮಾಣಕ್ಕೆ ₹2.50 ಕೋಟಿ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿಗೆ ಸೂಚಿಸಲಾಗಿದೆ. ಚನ್ನಕೇಶವ ಸ್ಮಾರಕ ಭವನಕ್ಕೆ ಅಂತಿಮ ರೂಪ ನೀಡುತ್ತಿದ್ದು, ಶೀಘ್ರದಲ್ಲೇ ಜನರ ಬಳಕೆಗೆ ನೀಡಲಾಗುವುದು’ ಎಂದರು.</p>.<p>ಗೊಲ್ಲರಹಟ್ಟಿ, ಚೋಳಂಬಳ್ಳಿ ಗ್ರಾಮಗಳಲ್ಲಿ ₹95 ಲಕ್ಷದಲ್ಲಿ ಜೆಜೆಎಂ ಕೆಲಸ ನಡೆಯುತ್ತಿದೆ. ಹರಳೂರು– ಬೈರಸಂದ್ರ ರಸ್ತೆ ನಿರ್ಮಾಣಕ್ಕೆ ₹1.60 ಕೋಟಿ ಖರ್ಚು ಮಾಡಲಾಗುತ್ತಿದೆ. ಕಾಮಗಾರಿಯಲ್ಲಿ ಲೋಪ ಆಗದಂತೆ ನೋಡಿಕೊಳ್ಳಬೇಕು. ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.</p>.<p>ಮುಖಂಡರಾದ ಶಿವಕುಮಾರ್ ಸಿದ್ದೇಗೌಡ, ಶಂಕರ್, ರಾಮಕೃಷ್ಣ, ಉಮಾಶಂಕರ್, ಜಾಕೀರ್, ರಘು, ರಾಜೇಶ್, ಗಿರೀಶ್, ಹನುಮಂತರಾಯಪ್ಪ, ಮಂಜುಳಮ್ಮ, ನಾಗರತ್ನಮ್ಮ, ಬಸವರಾಜು ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ತಾಲ್ಲೂಕಿನ ಕೈದಾಳ, ಬೈರಸಂದ್ರ, ಗೊಲ್ಲರಹಟ್ಟಿ, ಚೋಳಂಬಳ್ಳಿ ಗ್ರಾಮಗಳಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಸುರೇಶ್ಗೌಡ ಭೂಮಿ ಪೂಜೆ ನೆರವೇರಿಸಿದರು.</p>.<p>‘ಸಿ.ಸಿ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿಗಾಗಿ ₹5 ಕೋಟಿ ವ್ಯಯಿಸಲಾಗುತ್ತಿದೆ. ಗೂಳೂರು– ಕೈದಾಳ ರಸ್ತೆ ನಿರ್ಮಾಣಕ್ಕೆ ₹2.50 ಕೋಟಿ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿಗೆ ಸೂಚಿಸಲಾಗಿದೆ. ಚನ್ನಕೇಶವ ಸ್ಮಾರಕ ಭವನಕ್ಕೆ ಅಂತಿಮ ರೂಪ ನೀಡುತ್ತಿದ್ದು, ಶೀಘ್ರದಲ್ಲೇ ಜನರ ಬಳಕೆಗೆ ನೀಡಲಾಗುವುದು’ ಎಂದರು.</p>.<p>ಗೊಲ್ಲರಹಟ್ಟಿ, ಚೋಳಂಬಳ್ಳಿ ಗ್ರಾಮಗಳಲ್ಲಿ ₹95 ಲಕ್ಷದಲ್ಲಿ ಜೆಜೆಎಂ ಕೆಲಸ ನಡೆಯುತ್ತಿದೆ. ಹರಳೂರು– ಬೈರಸಂದ್ರ ರಸ್ತೆ ನಿರ್ಮಾಣಕ್ಕೆ ₹1.60 ಕೋಟಿ ಖರ್ಚು ಮಾಡಲಾಗುತ್ತಿದೆ. ಕಾಮಗಾರಿಯಲ್ಲಿ ಲೋಪ ಆಗದಂತೆ ನೋಡಿಕೊಳ್ಳಬೇಕು. ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.</p>.<p>ಮುಖಂಡರಾದ ಶಿವಕುಮಾರ್ ಸಿದ್ದೇಗೌಡ, ಶಂಕರ್, ರಾಮಕೃಷ್ಣ, ಉಮಾಶಂಕರ್, ಜಾಕೀರ್, ರಘು, ರಾಜೇಶ್, ಗಿರೀಶ್, ಹನುಮಂತರಾಯಪ್ಪ, ಮಂಜುಳಮ್ಮ, ನಾಗರತ್ನಮ್ಮ, ಬಸವರಾಜು ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>