ಬಿಜಿಎಸ್ ವೃತ್ತದ ಬಳಿ ಶುರುವಾದ ಜಾಥಾ ಅಶೋಕ ರಸ್ತೆ, ಸ್ವಾತಂತ್ರ್ಯ ಚೌಕ, ಜಿಲ್ಲಾಧಿಕಾರಿ ಕಚೇರಿ ಮುಖಾಂತರ ಡಿಎಚ್ಒ ಕಚೇರಿ ತಲುಪಿತು. ‘ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ’, ‘ಜತೆಗೂಡಿ ಮುನ್ನಡೆಯೋಣ ಮಲೇರಿಯಾ ನಿವಾರಣೆ ಮಾಡೋಣ’, ‘ಶೂನ್ಯ ಮಲೇರಿಯಾ ಗುರಿ ತಲುಪೋಣ’ ಎಂಬ ನಾಮಫಲಕ ಹಿಡಿದು ಸಾಗಿದರು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.