<p><strong>ಶಿರಾ:</strong> ಅದ್ದೂರಿ ಮದುವೆಯಾಗುವ ಬದಲು ಅದೇ ಹಣದಲ್ಲಿ ಬಡ ಕುಟುಂಬಗಳಿಗೆ ನೆರವಾಗಿ ಸರಳ ಸಾಮೂಹಿಕ ವಿವಾಹವಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಜೌಹರ್ ಗ್ರೂಪ್ ಮಾಲೀಕ ಸೈಯದ್ ಇಮ್ರಾನ್ ಹೇಳಿದರು.</p>.<p>ನಗರದ ಜಾಮಿಯಾ ಶಾದಿ ಮಹಲ್ನಲ್ಲಿ ಜೌಹರ್ ಗ್ರೂಪ್ನ ಅಲ್ ಹಜ್ ದಿವಂಗತ ಸೈಯದ್ ಆಸಿಂ ಸಾಹೇಬ್ ಕುಟುಂಬಸ್ಥರಾದ ಸೈಯದ್ ಇಕ್ಬಾಲ್ ಅವರ ಮಗ ಡಾ.ಸೈಯದ್ ಉಮರ್ ಮದುವೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ವಧು- ವರರಿಗೆ ಶುಭ ಕೋರಿ ಮಾತನಾಡಿದರು.</p>.<p>‘ಸಾಮಾಜಿಕ ಚಿಂತನೆಯೊಂದಿಗೆ ಬಡವರಿಗೆ ಆಸರೆಯಾಗಬೇಕು ಎನ್ನುವ ಉದ್ದೇಶದಿಂದ 14 ನವ ಜೋಡಿಗಳಿಗೆ ನಮ್ಮ ತಮ್ಮನ ಮದುವೆಯ ಜೊತೆಗೆ ಸಾಮೂಹಿಕವಾಗಿ ವಿವಾಹ ಮಾಡುತ್ತಿರುವುದು ಸಂತಸ ತಂದಿದೆ’ ಎಂದರು.</p>.<p>ಇಲ್ಲಿ ವಿವಾಹವಾದ ಜೋಡಿಗಳಿಗೆ ವಧುವಿಗೆ 3 ಗ್ರಾಂ ಚಿನ್ನದ ಓಲೆ, ವರನಿಗೆ ಬೆಳ್ಳಿ ಉಂಗುರ, ಬಟ್ಟೆ, ಬೀರು, ಮಂಚ, ಹಾಸಿಗೆ, ಮೂರು ತಿಂಗಳ ದವಸ ಧಾನ್ಯ ನೀಡಿ ಅವರ ಬದುಕು ಹಸನಾಗಲಿ ಎಂದು ಹಿರಿಯರು ಹಾರೈಸುತ್ತಿದ್ದಾರೆ ಎಂದರು.</p>.<p>ಜೌಹರ್ ಗ್ರೂಪ್ನ ಡಾ.ಸೈಯದ್ ಇಕ್ಬಾಲ್, ಬೇಗಂ ಮೊಹಲ್ಲಾ ಫ್ರೆಂಡ್ಸ್ ವೆಲ್ಫೇರ್ ಆರ್ಗನೈಸೇಷನ್ನ ನಾಸಿರ್ ಖಾನ್, ಆತಿಮ್ ಖಾನ್, ಕರೀಮ್ ಸಾಬ್, ಇಲಿಯಾಸ್ ಖಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ:</strong> ಅದ್ದೂರಿ ಮದುವೆಯಾಗುವ ಬದಲು ಅದೇ ಹಣದಲ್ಲಿ ಬಡ ಕುಟುಂಬಗಳಿಗೆ ನೆರವಾಗಿ ಸರಳ ಸಾಮೂಹಿಕ ವಿವಾಹವಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಜೌಹರ್ ಗ್ರೂಪ್ ಮಾಲೀಕ ಸೈಯದ್ ಇಮ್ರಾನ್ ಹೇಳಿದರು.</p>.<p>ನಗರದ ಜಾಮಿಯಾ ಶಾದಿ ಮಹಲ್ನಲ್ಲಿ ಜೌಹರ್ ಗ್ರೂಪ್ನ ಅಲ್ ಹಜ್ ದಿವಂಗತ ಸೈಯದ್ ಆಸಿಂ ಸಾಹೇಬ್ ಕುಟುಂಬಸ್ಥರಾದ ಸೈಯದ್ ಇಕ್ಬಾಲ್ ಅವರ ಮಗ ಡಾ.ಸೈಯದ್ ಉಮರ್ ಮದುವೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ವಧು- ವರರಿಗೆ ಶುಭ ಕೋರಿ ಮಾತನಾಡಿದರು.</p>.<p>‘ಸಾಮಾಜಿಕ ಚಿಂತನೆಯೊಂದಿಗೆ ಬಡವರಿಗೆ ಆಸರೆಯಾಗಬೇಕು ಎನ್ನುವ ಉದ್ದೇಶದಿಂದ 14 ನವ ಜೋಡಿಗಳಿಗೆ ನಮ್ಮ ತಮ್ಮನ ಮದುವೆಯ ಜೊತೆಗೆ ಸಾಮೂಹಿಕವಾಗಿ ವಿವಾಹ ಮಾಡುತ್ತಿರುವುದು ಸಂತಸ ತಂದಿದೆ’ ಎಂದರು.</p>.<p>ಇಲ್ಲಿ ವಿವಾಹವಾದ ಜೋಡಿಗಳಿಗೆ ವಧುವಿಗೆ 3 ಗ್ರಾಂ ಚಿನ್ನದ ಓಲೆ, ವರನಿಗೆ ಬೆಳ್ಳಿ ಉಂಗುರ, ಬಟ್ಟೆ, ಬೀರು, ಮಂಚ, ಹಾಸಿಗೆ, ಮೂರು ತಿಂಗಳ ದವಸ ಧಾನ್ಯ ನೀಡಿ ಅವರ ಬದುಕು ಹಸನಾಗಲಿ ಎಂದು ಹಿರಿಯರು ಹಾರೈಸುತ್ತಿದ್ದಾರೆ ಎಂದರು.</p>.<p>ಜೌಹರ್ ಗ್ರೂಪ್ನ ಡಾ.ಸೈಯದ್ ಇಕ್ಬಾಲ್, ಬೇಗಂ ಮೊಹಲ್ಲಾ ಫ್ರೆಂಡ್ಸ್ ವೆಲ್ಫೇರ್ ಆರ್ಗನೈಸೇಷನ್ನ ನಾಸಿರ್ ಖಾನ್, ಆತಿಮ್ ಖಾನ್, ಕರೀಮ್ ಸಾಬ್, ಇಲಿಯಾಸ್ ಖಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>