<p><strong>ಗುಬ್ಬಿ:</strong> ಸದಸ್ಯರು ಒಗ್ಗಟ್ಟಿನಿಂದ ಇದ್ದಲ್ಲಿ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಸರ್ಪಮಠದ ಜ್ಞಾನಾನಂದಪುರಿ ಸ್ವಾಮೀಜಿ ತಿಳಿಸಿದರು.</p>.<p>ತಾಲ್ಲೂಕು ಅಗ್ನಿಬನ್ನಿರಾಯ ಪತ್ತಿನ ಸಹಕಾರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಸಂಘದಿಂದ ಬರುವ ಆದಾಯವನ್ನು ಸಮುದಾಯದ ಅಭಿವೃದ್ಧಿಗೆ ಬಳಸಿಕೊಳ್ಳುವತ್ತ ಸದಸ್ಯರು ಗಮನಹರಿಸಬೇಕಿದೆ. ಸಂಘದ ಸದಸ್ಯರಲ್ಲಿ ಪ್ರಾಮಾಣಿಕತೆ ಇದ್ದಲ್ಲಿ ಮಾತ್ರ ಸಂಘಗಳು ಅಭಿವೃದ್ಧಿಗೊಂಡು ಲಾಭಾಂಶ ಪಡೆಯಲು ಸಾಧ್ಯ ಎಂದರು.</p>.<p>ಸಂಘದ ಅಧ್ಯಕ್ಷ ಹುಚ್ಚಪ್ಪ ಮಾತನಾಡಿ, ಸಂಘದ ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದರೆ ಹೆಚ್ಚಿನ ಸಾಲ ವಿತರಣೆ ಸಾಧ್ಯ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವ ಮೂಲಕ ಸಂಘದ ಬಲವರ್ಧನೆಗೆ ಸಹಕರಿಸಬೇಕು ಎಂದು ತಿಳಿಸಿದರು.</p>.<p>ಸಂಘದ ಉಪಾಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಕೆಲವೇ ಲಕ್ಷಗಳ ಮೂಲ ಬಂಡವಾಳದೊಂದಿಗೆ ಪ್ರಾರಂಭವಾಗಿದ್ದ ಸಂಘದ ವಹಿವಾಟು ಸದ್ಯ ₹2 ಕೋಟಿಗೂ ಅಧಿಕವಾಗಲು ಸಾಧ್ಯ. ವೈಯಕ್ತಿಕ ಸಾಲದ ಜೊತೆಗೆ ವಾಹನಗಳ ಸಾಲ ವಿತರಣೆ ಮಾಡಲಾಗುತ್ತಿದ್ದು, ಸದಸ್ಯರು ಇದರ ಸದುಪಯೋಗ ಪಡೆದುಕೊಂಡು ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದರು.</p>.<p>ಕಾರ್ಯದರ್ಶಿ ಜಿ.ಬಿ. ಮಲ್ಲಪ್ಪ ಹಾಗೂ ಹಿರಿಯ ನಿರ್ದೇಶಕ ನಂಜೇಗೌಡ ಮಾತನಾಡಿದರು.</p>.<p>ಮುಖಂಡರಾದ ಲೋಕೇಶ್ ಬಾಬು, ನಾಗರಾಜು, ವೆಂಕಟರಾಮಯ್ಯ, ಕರಿಗಿರಯ್ಯ, ಜುಂಜಯ್ಯ, ಹನುಮಯ್ಯ, ಹೇಮಲತಾ, ಬಸವರಾಜು, ರೇವಣ್ಣ, ನಾಗಣ್ಣ, ಕೃಷ್ಣಮೂರ್ತಿ, ಅರ್ಜುನಯ್ಯ, ಬಸವರಾಜು ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ:</strong> ಸದಸ್ಯರು ಒಗ್ಗಟ್ಟಿನಿಂದ ಇದ್ದಲ್ಲಿ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಸರ್ಪಮಠದ ಜ್ಞಾನಾನಂದಪುರಿ ಸ್ವಾಮೀಜಿ ತಿಳಿಸಿದರು.</p>.<p>ತಾಲ್ಲೂಕು ಅಗ್ನಿಬನ್ನಿರಾಯ ಪತ್ತಿನ ಸಹಕಾರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಸಂಘದಿಂದ ಬರುವ ಆದಾಯವನ್ನು ಸಮುದಾಯದ ಅಭಿವೃದ್ಧಿಗೆ ಬಳಸಿಕೊಳ್ಳುವತ್ತ ಸದಸ್ಯರು ಗಮನಹರಿಸಬೇಕಿದೆ. ಸಂಘದ ಸದಸ್ಯರಲ್ಲಿ ಪ್ರಾಮಾಣಿಕತೆ ಇದ್ದಲ್ಲಿ ಮಾತ್ರ ಸಂಘಗಳು ಅಭಿವೃದ್ಧಿಗೊಂಡು ಲಾಭಾಂಶ ಪಡೆಯಲು ಸಾಧ್ಯ ಎಂದರು.</p>.<p>ಸಂಘದ ಅಧ್ಯಕ್ಷ ಹುಚ್ಚಪ್ಪ ಮಾತನಾಡಿ, ಸಂಘದ ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದರೆ ಹೆಚ್ಚಿನ ಸಾಲ ವಿತರಣೆ ಸಾಧ್ಯ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವ ಮೂಲಕ ಸಂಘದ ಬಲವರ್ಧನೆಗೆ ಸಹಕರಿಸಬೇಕು ಎಂದು ತಿಳಿಸಿದರು.</p>.<p>ಸಂಘದ ಉಪಾಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಕೆಲವೇ ಲಕ್ಷಗಳ ಮೂಲ ಬಂಡವಾಳದೊಂದಿಗೆ ಪ್ರಾರಂಭವಾಗಿದ್ದ ಸಂಘದ ವಹಿವಾಟು ಸದ್ಯ ₹2 ಕೋಟಿಗೂ ಅಧಿಕವಾಗಲು ಸಾಧ್ಯ. ವೈಯಕ್ತಿಕ ಸಾಲದ ಜೊತೆಗೆ ವಾಹನಗಳ ಸಾಲ ವಿತರಣೆ ಮಾಡಲಾಗುತ್ತಿದ್ದು, ಸದಸ್ಯರು ಇದರ ಸದುಪಯೋಗ ಪಡೆದುಕೊಂಡು ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದರು.</p>.<p>ಕಾರ್ಯದರ್ಶಿ ಜಿ.ಬಿ. ಮಲ್ಲಪ್ಪ ಹಾಗೂ ಹಿರಿಯ ನಿರ್ದೇಶಕ ನಂಜೇಗೌಡ ಮಾತನಾಡಿದರು.</p>.<p>ಮುಖಂಡರಾದ ಲೋಕೇಶ್ ಬಾಬು, ನಾಗರಾಜು, ವೆಂಕಟರಾಮಯ್ಯ, ಕರಿಗಿರಯ್ಯ, ಜುಂಜಯ್ಯ, ಹನುಮಯ್ಯ, ಹೇಮಲತಾ, ಬಸವರಾಜು, ರೇವಣ್ಣ, ನಾಗಣ್ಣ, ಕೃಷ್ಣಮೂರ್ತಿ, ಅರ್ಜುನಯ್ಯ, ಬಸವರಾಜು ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>