‘ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದವರನ್ನು ಸೋಲಿಸಿ’ ಎಂದು ದೇವೇಗೌಡರು ತಮ್ಮ ಅಕ್ಕಪಕ್ಕ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಸಂಸದ ಜಿ.ಎಸ್.ಬಸವರಾಜು ಅವರನ್ನು ಕೂರಿಸಿಕೊಂಡು ಹೇಳುತ್ತಿದ್ದಾರೆ. ಕಳೆದ ಬಾರಿ ಅವರನ್ನು ಸೋಲಿಸಿದವರು ಪಕ್ಕದಲ್ಲೇ ಇರಬೇಕಾದರೆ, ಇನ್ನು ಮತದಾರರು ಯಾರನ್ನು ಸೋಲಿಸಬೇಕು ಎಂದು ಪ್ರಶ್ನಿಸಿದರು.