ಹೆಸರು ಕೇವಲ ಮೂರು ತಿಂಗಳ ಬೆಳೆಯಾಗಿದ್ದು, ಇನ್ನೂ ಒಂದೇ ಒಂದು ಹದ ಮಳೆ ಬಂದರೆ ಉತ್ತಮ ಫಸಲು ಪಡೆಯುವ ನಿರೀಕ್ಷೆ ರೈತರಲ್ಲಿದೆ. ಕಳೆದ ನಾಲ್ಕೈದು ವರ್ಷಗಳಿಂದ ಭೂಮಿಗೆ ಹಾಕಿದ ಬೀಜ ಹಿಂದಿರುಗದ ಸ್ಥಿತಿ ಬಂದಿತ್ತು. ಆದರೆ ಈ ವರ್ಷದ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆ ಆಗಿದೆ. ಬಿತ್ತನೆಯ ನಂತರ ಕಾಲ ಕಾಲಕ್ಕೆ ಬಿದ್ದ ಹದ ಮಳೆಯಿಂದ ಫಸಲು ಚನ್ನಾಗಿದೆ. ಮುಂದೆ ಯಾವುದೇ ಕೀಟಬಾಧೆ ಕಾಡದೆ ಹೋದರೆ ರೈತರು ನಿರೀಕ್ಷೆ
ಸುಳ್ಳಾಗದು ಎಂಬುದು ಕೆಲವರ ಅಭಿಪ್ರಾಯವಾಗಿದೆ.