ಮೇ 12ರಂದು ಸಂಜೆ ತ್ಯಾಗಟೂರು ಅರ್ಕೇಶ್ವರ ಸ್ವಾಮಿ, ಮೂಗನಾಯಕನ ಕೋಟೆ ಕೊಲ್ಲಾಪುರದಮ್ಮ ದೇವಿ, ಸಾಗಸಂದ್ರ ಕೆಂಪಮ್ಮ ದೇವಿ, ಕೆಸ್ತೂರಿನ ಅಹೋಬಲ ಲಕ್ಷ್ಮಿನರಸಿಂಹಸ್ವಾಮಿ, ಕೋಡಿನಾಗೇನಹಳ್ಳಿ ರಂಗನಾಥಸ್ವಾಮಿ, ನಿಟ್ಟೂರಿನ ಶಿವಭಕ್ತ ಬೇಡರ ಕಣ್ಣಪ್ಪಸ್ವಾಮಿ ದೇವರ ಆಗಮನವಿದೆ. ಕುಂಭಗಳ ಮೆರವಣಿಗೆ, ಗಣಪತಿ ಪೂಜೆ, ಗಂಗಾಪೂಜೆಯೊಂದಿಗೆ ಕರಿಯಮ್ಮ ದೇವಿಯ ಕಳಸ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ರಾತ್ರಿ ದೇವರಉತ್ಸವ ನಡೆಯಲಿದೆ. ಭಕ್ತಾದಿಗಳಿಗೆ ಮಹಾ ದಾಸೋಹ ಏರ್ಪಡಿಸಲಾಗಿದೆ.