<p><strong>ಕೊಡಿಗೇನಹಳ್ಳಿ: </strong>ಹಳೇ ಪಿಂಚಣಿದಾರರಿಗೆ ₹600 ಹಾಗೂ ಹೊಸಬರಿಗೆ ₹ 1,000 ಮಾಸಾಶನ ನೀಡುವ ಮೂಲಕ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಮಂಗಳವಾರ ಕಲಿದೇವಪುರ ಗ್ರಾಮದ ವೃದ್ಧಾಪ್ಯ ಹಾಗೂ ವಿಧವಾ ವೇತನ ಫಲಾನುಭವಿಗಳು ಪ್ರತಿಭಟನೆ ನಡೆಸಿದರು.</p>.<p>ಗ್ರಾಮದಲ್ಲಿ ಮಾಸಾಶನ ಪಡೆಯುತ್ತಿರುವ ಅನೇಕರಿಗೆ ಹಲವು ವರ್ಷಗಳಿಂದ ಕೇವಲ ₹600 ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಮಾಸಾಶನ ಪಡೆಯುವವರಿಗೆ ಮಾತ್ರ<br />₹1,000 ಬರುತ್ತಿದೆ ಎಂದರು.</p>.<p>ಈ ಭಾಗ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿನ ಜನರಿಗೆ ಮಳೆಗಾಲದಲ್ಲಿ ಬಿತ್ತನೆ, ಕಳೆ ತೆಗೆಯುವುದು ಮತ್ತು ಕಟಾವು ಸಮಯದಲ್ಲಿ ಕೆಲಸ ಕಾರ್ಯಗಳನ್ನು ಬಿಟ್ಟರೆ ಬೇರೆ ಯಾವುದೇ ಕೆಲಸ ದೊರೆಯುವುದಿಲ್ಲ. ಸರ್ಕಾರದಿಂದ ಬರುವ ₹ 600 ಆಧಾರವಾಗಿದ್ದು, ಅದು ಸಾಲುತ್ತಿಲ್ಲ ಎಂದರು.<br />ಹೊಸ ಪಿಂಚಣಿದಾರರಿಗೆ ನೀಡುವಂತೆ ಎಲ್ಲರಿಗೂ ₹1,000 ನೀಡಬೇಕು ಎಂದು ಒತ್ತಾಯಿಸಿದರು.</p>.<p>ಅಶ್ವತ್ಥಮ್ಮ, ಗಂಗರತ್ನಮ್ಮ, ನರಸಮ್ಮ, ಚಿನ್ನಮ್ಮ, ಲಕ್ಷ್ಮಮ್ಮ, ಗಂಗಮ್ಮ, ಚಿಕ್ಕರಂಗಮ್ಮ, ಎನ್. ಅಶ್ವತ್ಥಮ್ಮ, ಲಕ್ಷ್ಮೀನರಸಮ್ಮ, ಟಿ. ನರಸಮ್ಮ, ಆರ್. ಗಂಗಮ್ಮ, ಎನ್. ನರಸಮ್ಮ, ರತ್ನಮ್ಮ, ನಾಗಮ್ಮ, ರತ್ನಮ್ಮ ಹನುಮಂತರೆಡ್ಡಿ, ನಾಗರತ್ನಮ್ಮ, ದೊಡ್ಡಕ್ಕ, ಮಂಜಮ್ಮ, ಯಶೋಧಮ್ಮ, ವೆಂಕಟಲಕ್ಷ್ಮಮ್ಮ, ಹನುಮಕ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಡಿಗೇನಹಳ್ಳಿ: </strong>ಹಳೇ ಪಿಂಚಣಿದಾರರಿಗೆ ₹600 ಹಾಗೂ ಹೊಸಬರಿಗೆ ₹ 1,000 ಮಾಸಾಶನ ನೀಡುವ ಮೂಲಕ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಮಂಗಳವಾರ ಕಲಿದೇವಪುರ ಗ್ರಾಮದ ವೃದ್ಧಾಪ್ಯ ಹಾಗೂ ವಿಧವಾ ವೇತನ ಫಲಾನುಭವಿಗಳು ಪ್ರತಿಭಟನೆ ನಡೆಸಿದರು.</p>.<p>ಗ್ರಾಮದಲ್ಲಿ ಮಾಸಾಶನ ಪಡೆಯುತ್ತಿರುವ ಅನೇಕರಿಗೆ ಹಲವು ವರ್ಷಗಳಿಂದ ಕೇವಲ ₹600 ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಮಾಸಾಶನ ಪಡೆಯುವವರಿಗೆ ಮಾತ್ರ<br />₹1,000 ಬರುತ್ತಿದೆ ಎಂದರು.</p>.<p>ಈ ಭಾಗ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿನ ಜನರಿಗೆ ಮಳೆಗಾಲದಲ್ಲಿ ಬಿತ್ತನೆ, ಕಳೆ ತೆಗೆಯುವುದು ಮತ್ತು ಕಟಾವು ಸಮಯದಲ್ಲಿ ಕೆಲಸ ಕಾರ್ಯಗಳನ್ನು ಬಿಟ್ಟರೆ ಬೇರೆ ಯಾವುದೇ ಕೆಲಸ ದೊರೆಯುವುದಿಲ್ಲ. ಸರ್ಕಾರದಿಂದ ಬರುವ ₹ 600 ಆಧಾರವಾಗಿದ್ದು, ಅದು ಸಾಲುತ್ತಿಲ್ಲ ಎಂದರು.<br />ಹೊಸ ಪಿಂಚಣಿದಾರರಿಗೆ ನೀಡುವಂತೆ ಎಲ್ಲರಿಗೂ ₹1,000 ನೀಡಬೇಕು ಎಂದು ಒತ್ತಾಯಿಸಿದರು.</p>.<p>ಅಶ್ವತ್ಥಮ್ಮ, ಗಂಗರತ್ನಮ್ಮ, ನರಸಮ್ಮ, ಚಿನ್ನಮ್ಮ, ಲಕ್ಷ್ಮಮ್ಮ, ಗಂಗಮ್ಮ, ಚಿಕ್ಕರಂಗಮ್ಮ, ಎನ್. ಅಶ್ವತ್ಥಮ್ಮ, ಲಕ್ಷ್ಮೀನರಸಮ್ಮ, ಟಿ. ನರಸಮ್ಮ, ಆರ್. ಗಂಗಮ್ಮ, ಎನ್. ನರಸಮ್ಮ, ರತ್ನಮ್ಮ, ನಾಗಮ್ಮ, ರತ್ನಮ್ಮ ಹನುಮಂತರೆಡ್ಡಿ, ನಾಗರತ್ನಮ್ಮ, ದೊಡ್ಡಕ್ಕ, ಮಂಜಮ್ಮ, ಯಶೋಧಮ್ಮ, ವೆಂಕಟಲಕ್ಷ್ಮಮ್ಮ, ಹನುಮಕ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>