ರಂಗಸ್ವಾಮಿ ಗುಡ್ಡದ ತೋಟಗಾರಿಕೆ ಇಲಾಖೆ ಕಚೇರಿ ಬಳಿ ಪ್ರತಿಭಟನೆಯಲ್ಲಿ ರಾಯಗೊಂಡನಹಳ್ಳಿ ತೆಂಗು ಉತ್ಪಾದಕರ ಸಂಘದ ಅಧ್ಯಕ್ಷ ಹಟ್ಟಿ ರಂಗ ಮಾತನಾಡಿ, ‘ಇಲಾಖೆಯಿಂದ ಪ್ರತಿ ವರ್ಷ 50 ಸಾವಿರ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳನ್ನು ರೈತರಿಗೆ ವಿತರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 70 ಸಾವಿರ ತೆಂಗಿನ ಸಸಿಗಳನ್ನು ಬೆಳೆಸುವ ಉದ್ದೇಶ ಇಲಾಖೆ ಹೊಂದಿದೆ. ಆದರೆ, ಈ ಬಾರಿ ಶೇ 20ರಷ್ಟು ಕಳಪೆ ತೆಂಗು ಉತ್ಪಾದನೆಗಾಗಿ ಬಳಸುತ್ತಿರುವುದು ಕಂಡುಬಂದಿದೆ’ ಎಂದು ಆರೋಪಿಸಿದರು.