ಗ್ರಾಮದಲ್ಲಿ 6ಕ್ಕೂ ಹೆಚ್ಚು ಸೇತುವೆ ನಿರ್ಮಿಸಿದ್ದು ಎಲ್ಲವೂ ಕಳಪೆ ಕಾಮಗಾರಿಯಿಂದ ಕೂಡಿವೆ. ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇವರ ಕಾಮಗಾರಿಗಳನ್ನು ಕಿತ್ತುಹಾಕಿ ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥರಾದ ದಯಾನಂದ್, ಯೋಗೀಶ್, ಆನಂದ್, ಕಿಶೋರ್, ಮೋಹನ್, ಪುನೀತ್, ರವಿಕುಮಾರ್, ಪರಮೇಶ್, ದೀಪು, ಲೋಕೇಶ್, ಮಂಜುನಾಥ್, ಕುಮಾರ್ ಎಚ್ಚರಿಸಿದ್ದಾರೆ.