ಮಧುಗಿರಿ: ತಾಲ್ಲೂಕು ಕಾರಮರಡಿ ಗ್ರಾಮದ ವಿಶ್ವಕರ್ಮ ರುದ್ರಭೂಮಿಯ ಸಮಾಧಿಗಳನ್ನು ಹಿಟಾಚಿ ಯಂತ್ರದ ಮೂಲಕ ಕಿತ್ತು ಹಾಕಿ ರಸ್ತೆ ನಿರ್ಮಾಣ ಮಾಡಿಕೊಂಡಿರುವುದನ್ನು ಖಂಡಿಸಿ ಸಮುದಾಯದ ಮುಖಂಡರು ಶುಕ್ರವಾರ ರುದ್ರಭೂಮಿಯಲ್ಲಿ ಪ್ರತಿಭಟಿಸಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕಾಗಿ ಗುತ್ತಿಗೆದಾರರು ಸಮಾಧಿಗಳನ್ನು ಕಿತ್ತು ಹಾಕಿ ರಸ್ತೆ ಮಾಡಿಕೊಂಡಿದ್ದಾರೆ.
ತಾಲ್ಲೂಕು ಕಸಬಾ ವ್ಯಾಪ್ತಿಯ ಕಾರಮರಡಿ ಗ್ರಾಮದ ಸರ್ವೆ ನಂ. 75ರಲ್ಲಿ ಸಾರ್ವಜನಿಕ ರುದ್ರಭೂಮಿಗೆ ಈ ಸ್ಥಳ ಮಂಜೂರಾಗಿದೆ. ಹಲವಾರು ವರ್ಷಗಳಿಂದ ರುದ್ರಭೂಮಿಯಲ್ಲಿ ಅಂತ್ಯಅಂಸ್ಕಾರ ನಡೆಸುತ್ತಾ ಬಂದಿದ್ದೇವೆ. 7ರಿಂದ 8 ಸಮಾಧಿಗಳನ್ನು ಹಿಟಾಚಿ ಯಂತ್ರದ ಮೂಲಕ ಕಿತ್ತು ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಮುಖ್ಯಾಧಿಕಾರಿ ಅಮರನಾರಾಯಣ, ಕಂದಾಯ ನಿರೀಕ್ಷಕ ಸಿದ್ದರಾಜು ಭೇಟಿ ನೀಡಿ ಪರಿಶೀಲಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಎಂ.ವಿ.ಮಂಜುನಾಥ್ ಆಚಾರ್, ಅನಂತ ಪದ್ಮನಾಭಚಾರ್, ಬೋಜರಾಜು, ಶ್ರೀನಿವಾಸ್ ಆಚಾರ್, ನಂದಚಾರ್, ಶಂಕರ್ ಚಾರ್, ನಾಗಾರಾಜು, ರಾಮಚಾರ್, ಶ್ರೀನಿವಾಸ್, ಸುದರ್ಶನ್, ರವಿಶಂಕರ್, ಶಂಕರಪ್ಪ ಹಾಜರಿದ್ದರು.