ರೈತ ಮುಖಂಡ ಮೆಳೇಕಲ್ಲಹಳ್ಳಿ ಯೋಗೀಶ್ ಮಾತನಾಡಿ, ಬಟವಾಡಿಯ ಸರ್ವೆ ನಂ 38ರಲ್ಲಿ ಅಬ್ದುಲ್ ಸತ್ತಾರ್ ಹೆಸರಿನಲ್ಲಿ 16.30 ಎಕರೆ ಇತ್ತು. ಅಬ್ದುಲ್ ಸತ್ತಾರ್ ಅವರ 5 ಜನ ಮಕ್ಕಳಲ್ಲಿ ಟಿ.ಎ.ಮಹಮದ್ ಗೌಸ್ ಎಂಬುವವರಿಗೆ 7.21 ಎಕರೆ ಬಂದಿದೆ. ಈ ಭೂಮಿಯಲ್ಲಿ 2 ಎಕರೆಯನ್ನು 1981-82ರಲ್ಲಿ ಜಿಲ್ಲಾಧಿಕಾರಿ ಮೂಲಕ ಭೂ ಪರಿವರ್ತನೆ ಮಾಡಿಸಲಾಗಿದೆ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆದು 42 ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ.