ಶಿರಾ: ತಾಲ್ಲೂಕಿನ ಗಿಡಗನಹಳ್ಳಿಯಲ್ಲಿ ಇದೇ 30ರಿಂದ ಏಪ್ರಿಲ್ 3ರ ವರೆಗೆ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 30ರಂದು ಬೆಳಿಗ್ಗೆ 7ಗಂಟೆಗೆ ಸ್ವಾಮಿಯ ಗಂಗಾಸ್ನಾನ, ರಾತ್ರಿ 9 ಗಂಟೆಗೆ ಮಡಿತೇರು ನೆರವೇರಲಿದೆ. 31ರಂದು ರಾತ್ರಿ 9ಗಂಟೆಗೆ ಗರುಡೋತ್ಸವ (ದವನೋತ್ಸವ) ಇದೆ.
ಏಪ್ರಿಲ್ 1ರಂದು ರಾತ್ರಿ 9 ಗಂಟೆಗೆ ಕಲ್ಲುಗಾಲಿ ರಥೋತ್ಸವ ನಡೆಯಲಿದೆ. ಏಪ್ರಿಲ್ 2ರಂದು ರಾತ್ರಿ 9 ಗಂಟೆಗೆ ಗಜಪತಿ ಮೇಲೆ ಸ್ವಾಮಿ ಉತ್ಸವ, ಮಾರ್ಚ್ 3ರಂದು ರಾತ್ರಿ 10 ಗಂಟೆಗೆ ಹನುಮಂತನ ಮೇಲೆ ಸ್ವಾಮಿಯ ಉತ್ಸವ (ಹೂವಿನ ರಥೋತ್ಸವ) ಅದ್ದೂರಿಯಾಗಿ ನೆರವೇರಲಿದೆ. ಅಂದು ಬರುವ ಭಕ್ತರಿಗೆ ಬೆಳಿಗ್ಗೆ ಉಪಾಹಾರದ ವ್ಯವಸ್ಥೆ, ರಾತ್ರಿ ಹರಿಸೇವೆ (ಅನ್ನ ಸಂತರ್ಪಣೆ) ನಡೆಯಲಿದೆ. ಮಧ್ಯಾಹ್ನ 2ಕ್ಕೆ ಉಂಡೆ ಮಂಡೆ ಸೇವೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.