ಈ ಹಿಂದೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿತ್ತು. ಆದರೆ ಸರ್ಕಾರ ಆ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಆಗ ಜೆಡಿಎಸ್ಗೆ ಬಹುಮತ ಇದ್ದರೂ, ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆ ದಟ್ಟವಾಗಿತ್ತು. ಈ ಬಗ್ಗೆ ಮಾತುಕತೆಯೂ ನಡೆದಿತ್ತು. ಆದರೆ ಈಗ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾತಿ ನಿಗದಿಯಾಗಿದ್ದು, ಕಾಂಗ್ರೆಸ್ಗೆ ಅಧಿಕಾರ ಕೈ ತಪ್ಪಿದೆ. ಸ್ಥಳೀಯ ಶಾಸಕ ಜಿ.ಪರಮೇಶ್ವರ ಅವರಿಗೆ ಮುಖಭಂಗ ಮಾಡುವ ಉದ್ದೇಶದಿಂದಲೇ ಮೀಸಲಾತಿಯನ್ನು ಎಸ್ಟಿ ಮಹಿಳೆಗೆ ಬದಲಾಯಿಸಲಾಗಿದೆ. ಈ ಬದಲಾವಣೆಯಲ್ಲಿ ಕೆ.ಎನ್. ರಾಜಣ್ಣ ಕೈವಾಡ ಇದೆ ಎಂಬ ವಿಶ್ಲೇಷಣೆಗಳೂ ನಡೆದಿವೆ.