ಸಂತೆ ಮೈದಾನದಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದರೂ ಪ್ರತಿ ಸೋಮವಾರ ಮುಖ್ಯರಸ್ತೆಯಲ್ಲೆ ವರ್ತಕರು ತಮ್ಮ ಅಂಗಡಿಗಳನ್ನು ಇಡುತ್ತಿದ್ದರು. ಇದರಿಂದಾಗಿ ವಾಹನ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿತ್ತು. ಇದರೊಂದಿಗೆ ಪ್ರತಿ ವಾರ ಒಂದಲ್ಲಾ ಒಂದು ಕಳವು ಪ್ರಕರಣಗಳು ಸಂತೆಯಲ್ಲಿ ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಪಿಎಸ್ಐ ಮಂಜುನಾಥ್ ಹಾಗೂ ಸಿಬ್ಬಂದಿ ರಸ್ತೆ ಬದಿಯಲ್ಲಿದ್ದ ಅಂಗಡಿಗಳನ್ನು ಸೋಮವಾರ ಬೆಳಿಗ್ಗೆಯೇ ತೆರವುಗೊಳಿಸಿದರು.