ತುಮಕೂರು: ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದಿಂದ ಮೇ 1 ರಂದು ಬುಧವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಕೇಂದ್ರ ಸಂಘದ ಆವರಣದಲ್ಲಿ ಹಿಂದೂ ಸಾದರ ವಧು-ವರರ ಅನ್ವೇಷಣಾ ಸಮಾವೇಶ ಆಯೋಜಿಸಲಾಗಿದೆ.
ಆಸಕ್ತರು ನಗರದಲ್ಲಿನ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ₹ 500 ನೀಡಿ ಅರ್ಜಿಗಳನ್ನು ಪಡೆಯಬೇಕು. ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ವಧು ಅಥವಾ ವರನ ವಿವರಗಳನ್ನು ಭರ್ತಿ ಮಾಡಿ ಏ.25 ರ ಒಳಗಾಗಿ ಕೇಂದ್ರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು.
ಸಮಾವೇಶದ ದಿನದಂದು ವಧು-ವರ ಹಾಗೂ ಅವರ ತಂದೆ, ತಾಯಿ, ಪೋಷಕರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಸಮಿತಿಯ ಅಧ್ಯಕ್ಷ ಡಿ.ಇ.ರವಿಕುಮಾರ್ 9900959516 ಹಾಗೂ ನಗರ ಘಟಕ ಅಧ್ಯಕ್ಷ ಎಸ್.ಟಿ.ಡಿ ನಾಗರಾಜ್ 9844296408 ಸಂಪರ್ಕಿಸಲು ಕೋರಲಾಗಿದೆ.