ಚೇಳೂರು : ರಾಜ್ಯದಲ್ಲಿ ಸೋಮವಾರ ಸರ್ಕಾರಿ ಶಾಲೆಗಳು ಪುನರಾರಂಭಗೊಂಡಿವೆ. ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲಿ ಹಬ್ಬದ ವಾತಾವರಣದ ಶಾಲಾ ಪ್ರಾರಂಭೋತ್ಸವ ಕಂಡುಬಂದಿತು.
ನಲ್ಲಗುಟ್ಲಪಲ್ಲಿ ಕ್ಲಸ್ಟರ್ ನ ಪಸುಫಲವಾರಪಲ್ಲಿ ಶಾಲೆಯನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕರು ಗುಲಾಬಿ ಹೂವು ಮತ್ತು ಸಿಹಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಪೋಷಕರು ಮಕ್ಕಳನ್ನು ಸ್ವಚ್ಛವಾಗಿ ಶಾಲೆಗೆ ಕರೆದುಕೊಂಡು ಬಂದು ಶಾಲೆಯಲ್ಲಿ ಹೋಗುತ್ತಿರುವುದು ಸಾಮಾನ್ಯವಾಗಿ ಕಂಡು ಬಂತು.
ಮುಖ್ಯ ಶಿಕ್ಷಕ ವಿ.ಸತ್ಯನಾರಾಯಣ, ಲಕ್ಷ್ಮಿ ನಾರಾಯಣ, ನರಸಿಂಹಪ್ಪ,ಹಾಗೂ ಎಸ್ ಟಿಎಂಸಿ ಅಧ್ಯಕ್ಷ ನರಸಿಂಹಪ್ಪ,ಹಾಗೂ ಸದಸ್ಯರಾದ ಮಂಜುನಾಥ,ಅಂಜಿನಮ್ಮ,ಭಾಗ್ಯಮ್ಮ,ವೆಂಕಟೇಶ್, ಹಾಗೂ ಗ್ರಾಮಸ್ಥರು ಇದ್ದರು,