ತುಮಕೂರಿನಲ್ಲಿ ಶುಕ್ರವಾರ ಸಿದ್ಧಗಂಗಾ ಕಾಲೇಜಿನ ಪರೀಕ್ಷಾ ಕೇಂದ್ರದ ಮುಂದೆ ಮಕ್ಕಳಿಗಾಗಿ ಕಾಯುತ್ತಿದ್ದ ಪೋಷಕರು
ತುಮಕೂರಿನ ಎಂಪ್ರೆಸ್ ಕಾಲೇಜು ಬಳಿ ಶುಕ್ರವಾರ ಪರೀಕ್ಷೆ ಆರಂಭಕ್ಕೂ ಮುನ್ನ ಅಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿನಿಯರು
ದ್ವಿತೀಯ ಪಿಯುಸಿ ಪರೀಕ್ಷೆ ಸುಸೂತ್ರ 23,130 ಮಂದಿ ವಿದ್ಯಾರ್ಥಿಗಳು ನೋಂದಣಿ 30 ಮಂದಿ ಅಂಧರು, ಅಂಗವಿಕಲ ಅಭ್ಯರ್ಥಿಗಳು
ಸುಲಭವಾಗಿತ್ತು ಪರೀಕ್ಷೆಗೂ ಮುಂಚೆ ಅಭ್ಯಾಸ ಮಾಡಿದ ಪ್ರಶ್ನೆಗಳೇ ಬಂದಿದ್ದರಿಂದ ಹೆಚ್ಚಿನ ಸಮಸ್ಯೆಯಾಗಲಿಲ್ಲ. ತುಂಬಾ ಸುಲಭವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆದಿದ್ದೇನೆ. ಕಾಲೇಜಿನಲ್ಲಿ ಚೆನ್ನಾಗಿ ಅಭ್ಯಾಸ ಮಾಡಿಸಿದ್ದು ಪರೀಕ್ಷೆಗೆ ನೆರವಾಯಿತು.
ರಾಹುಲ್ ವಿದ್ಯಾನಿಧಿ ಕಾಲೇಜು
ಕನ್ನಡ ತುಂಬಾ ಇಷ್ಟ ಕನ್ನಡ ಪತ್ರಿಕೆ ಯಾರಿಗೂ ಕಷ್ಟ ಆಗುವುದಿಲ್ಲ. ಓದಿದ ಎಲ್ಲ ವಿಷಯಗಳಲ್ಲಿ ಕನ್ನಡ ನಮಗೆ ತುಂಬಾ ಇಷ್ಟ. ಕಷ್ಟ ಅಂತ ಏನೂ ಇಲ್ಲ. ಖುಷಿಯಿಂದಲೇ ಪರೀಕ್ಷೆ ಬರೆದೆ.
ತೇಜಸ್ವಿನಿ ಉಮಾಪ್ರಗತಿ ಕಾಲೇಜು
ಚೆನ್ನಾಗಿ ಓದಿದ್ದೆ ಹಲವು ದಿನಗಳಿಂದ ಪರೀಕ್ಷೆಗೆ ತಯಾರಿ ನಡೆಸಿದ್ದೆ. ಹೀಗಾಗಿ ಮೊದಲ ದಿನ ಕಷ್ಟ ಅನ್ನಿಸಲಿಲ್ಲ. ಪರೀಕ್ಷೆಯ ಆರಂಭದ ದಿನ ಅಂತ ಸ್ವಲ್ಪ ಭಯ ಇತ್ತು. ಅದು ಬಿಟ್ಟರೆ ತುಂಬಾ ಖುಷಿಯಿಂದ ಪರೀಕ್ಷೆ ಬರೆದಿದ್ದೇನೆ.
ಗಗನ್ ದೀಪ್ ಶ್ರೀಚೈತನ್ಯ ಕಾಲೇಜು
ಸಮಯ ಕೊಟ್ಟಿದ್ದು ನೆರವಾಯಿತು ಪರೀಕ್ಷೆಯ ಸಿದ್ಧತೆಗಾಗಿ ಸಮಯ ಕೊಟ್ಟಿದ್ದು ಸಹಾಯಕವಾಯಿತು. ತಯಾರಿ ನಡೆಸಲು ಹೆಚ್ಚಿನ ಸಮಯ ಇತ್ತು. ಇದರಿಂದ ಪರೀಕ್ಷೆ ಸುಲಭವಾಯಿತು. ಕನ್ನಡದ ಜತೆಗೆ ಎಲ್ಲ ಪತ್ರಿಕೆಗಳಿಗೂ ಅಭ್ಯಾಸ ನಡೆಯುತ್ತಿದೆ.
ಸಂಜುಶ್ರೀ ಸಿದ್ಧಗಂಗಾ ಪಿಯು ಕಾಲೇಜು
ಎಲ್ಲ ಪತ್ರಿಕೆ ಹೀಗೆ ಇರಲಿ ಮುಂದಿನ ಎಲ್ಲ ಪ್ರಶ್ನೆ ಪತ್ರಿಕೆಗಳು ಕನ್ನಡ ಪತ್ರಿಕೆಯಂತೆ ಸುಲಭವಾಗಿ ಇದ್ದರೆ ಚೆನ್ನ. ನಮ್ಮ ಮುಂದಿನ ಪರೀಕ್ಷೆ ಇತಿಹಾಸ. ಯಾವುದೇ ತೊಂದರೆಯಾಗದಂತೆ ಎಲ್ಲವೂ ಇದೇ ರೀತಿ ನಡೆಯಬೇಕು.