ತಾಲ್ಲೂಕಿನ 400ಕ್ಕೂ ಹೆಚ್ಚು ರೈತರು ನೊಂದಣಿಗಾಗಿ ಕಾಯುತ್ತಿದ್ದರು. ತುರುವೇಕೆರೆ ತಾಲ್ಲೂಕಿನ ಐವತ್ತಕ್ಕೂ ಹೆಚ್ಚು ರೈತರು ನೊಂದಣಿಗಾಗಿ ಬಂದಿರುವುದನ್ನು ಕಂಡ ತಾಲ್ಲೂಕಿನ ರೈತರು ಅಸಮಾಧಾನ ವ್ಯಕ್ತಪಡಿಸಿದರು. ತುರುವೇಕೆರೆ ತಾಲ್ಲೂಕಿನಲ್ಲಿ ನೊಂದಣಿಗಾಗಿ ಏಳು ಕೇಂದ್ರಗಳನ್ನು ಪ್ರಾರಂಭಿಸಿದ್ದರೂ ತಾಲ್ಲೂಕಿನ ಕೇಂದ್ರಕ್ಕೆ ಬಂದಿರುವುದನ್ನು ಖಂಡಿಸಿ ಹೊರ ತಾಲ್ಲೂಕಿನವರ ನೊಂದಣಿ ಮಾಡದಂತೆ ಆಗ್ರಹಪಡಿಸಿದಾಗ ಎರಡು ಗುಂಪಿನ ನಡುವೆ ವಾಗ್ವಾದ ನಡೆಯಿತು. ಪೊಲೀಸರ ಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಗೊಂಡು ಕುಣಿಗಲ್ ತಾಲ್ಲೂಕಿನವರಿಗೆ ಮಾತ್ರ ನೊಂದಣಿ ಪ್ರಾರಂಭಿಸಲಾಯಿತು.