‘ಏಕಾಏಕಿ ಲಾಕ್ಡೌನ್, ಕರ್ಫ್ಯೂ ಹೇರಿದರೆ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಎರಡು ವರ್ಷಗಳಿಂದ ಕೋವಿಡ್ ನಿರ್ಬಂಧ, ಲಾಕ್ಡೌನ್ನಿಂದಾಗಿ ಸಾಕಷ್ಟು ಹೈರಾಣಾಗಿದ್ದೇವೆ. ಅನೇಕ ಕುರಿ, ಮೇಕೆಗಳು ರೋಗದಿಂದ ಸತ್ತವು. ಈಗ ಇರುವ ಮರಿಗಳನ್ನು ಮಾರಿ ಜೀವನ ಸಾಗಿಸೋಣ ಎಂದರೆ ಕರ್ಫ್ಯೂ ಅಡ್ಡ ಬಂದಿದೆ. ಇದರಿಂದ ಮರಿಗಳಿಗೆ ಬೇಡಿಕೆ ಇಲ್ಲವಾಗಿದೆ. ಗ್ರಾಹಕರು ಕೇಳಿದ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ’ ಎನ್ನುತ್ತಾರೆ ರೈತರಾದ ನಾಗರೆಡ್ಡಿ ಮತ್ತುಚಂದ್ರಣ್ಣ.