<p><strong>ಶಿರಾ:</strong> ನಗರದ ತಾಲ್ಲೂಕು ಆರೋಗ್ಯ ಕೇಂದ್ರದ ಆವರಣದಲ್ಲಿ ಒಂದೂವರೆ ತಿಂಗಳಿನಿಂದ ‘108’ ಆಂಬುಲೆನ್ಸ್ ಟೈರ್ ಇಲ್ಲದ ಕಾರಣ ಮೂಲೆ ಸೇರಿದ್ದು, ಬಡ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.</p>.<p>ಸರ್ಕಾರ ಆರೋಗ್ಯ ಕವಚ ಯೋಜನೆಯಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ‘108’ ಆಂಬುಲೆನ್ಸ್ ಯೋಜನೆ ರೂಪಿಸಿದ್ದು, ಅಗತ್ಯ ಇರುವ ಯಾರು ಬೇಕಾದರೂ ‘108’ ಸಂಖ್ಯೆಗೆ ಕರೆ ಮಾಡಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.</p>.<p>ಆದರೆ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳಿನಿಂದ ಟೈರ್ ಇಲ್ಲ ಎಂದು ಆಂಬುಲೆನ್ಸ್ ಅನ್ನು ಮೂಲೆಯಲ್ಲಿ ನಿಲ್ಲಿಸಿದ್ದಾರೆ.</p>.<p>ಆಂಬುಲೆನ್ಸ್ಗೆ ಒಂದು ಟೈರು ಹಾಕಿಸುವ ಶಕ್ತಿ ಸರ್ಕಾರಕ್ಕೆ ಇಲ್ಲವೇ? ಒಂದು ವೇಳೆ ಸರ್ಕಾರ ಟೈರ್ ಹಾಕಿಸಲು ಹಿಂದೇಟು ಹಾಕಿದರೆ ಆಸ್ಪತ್ರೆ ಅಥವಾ ದಾನಿಗಳ ಸಹಕಾರದಿಂದ ಟೈರ್ ಹಾಕಿಸಿದ್ದರೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಸಾರ್ವಜನಿಕರು.</p>.<p>ಖಾಸಗಿಯವರ ದಂಧೆ: ನಗರದಲ್ಲಿ ಖಾಸಗಿ ಆಂಬ್ಯುಲೆನ್ಸ್ಗಳ ದರ್ಬಾರ್ ಹೆಚ್ಚಾಗಿದ್ದು, ಇವರ ಪ್ರಭಾವಕ್ಕೆ ಮಣಿದು ಆಸ್ಪತ್ರೆ ಆಡಳಿತ ಮಂಡಳಿಯವರು ಆಂಬ್ಯುಲೆನ್ಸ್ ಅನ್ನು ಮೂಲೆಯಲ್ಲಿ ನಿಲ್ಲಿಸಿದ್ದಾರೆ ಎಂದು ರೋಗಿಗಳು ದೂರುತ್ತಾರೆ.</p>.<p>ಸರ್ಕಾರಿ ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಖಾಸಗಿ ಆಂಬ್ಯುಲೆನ್ಸ್ಗಳು ನಿಂತಿದ್ದು, ಅನಿವಾರ್ಯವಾಗಿ ಜನರು ಹೆಚ್ಚು ಹಣ ತೆತ್ತು ಇವುಗಳಲ್ಲಿ ಹೋಗಬೇಕಿದೆ. ಆಸ್ಪತ್ರೆಯ ಕೆಲವು ಸಿಬ್ಬಂದಿ ಇವರ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದು ರೋಗಿಗಳು ಸಂಕಷ್ಟ ಪಡುವಂತಾಗಿದೆ ಎಂದೂ ಆರೋಪಿಸಿದ್ದಾರೆ.</p>.<p>ಮೇಲಧಿಕಾರಿಗಳು ಎಚ್ಚೆತ್ತು ಆಂಬುಲೆನ್ಸ್ಗೆ ಹೊಸ ಟೈರ್ ಹಾಕಿಸುವ ಮೂಲಕ ರೋಗಿಗಳ ನೋವಿಗೆ ಸ್ಪಂದಿಸಬೇಕು ಎಂದು ರೋಗಿಗಳು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ:</strong> ನಗರದ ತಾಲ್ಲೂಕು ಆರೋಗ್ಯ ಕೇಂದ್ರದ ಆವರಣದಲ್ಲಿ ಒಂದೂವರೆ ತಿಂಗಳಿನಿಂದ ‘108’ ಆಂಬುಲೆನ್ಸ್ ಟೈರ್ ಇಲ್ಲದ ಕಾರಣ ಮೂಲೆ ಸೇರಿದ್ದು, ಬಡ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.</p>.<p>ಸರ್ಕಾರ ಆರೋಗ್ಯ ಕವಚ ಯೋಜನೆಯಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ‘108’ ಆಂಬುಲೆನ್ಸ್ ಯೋಜನೆ ರೂಪಿಸಿದ್ದು, ಅಗತ್ಯ ಇರುವ ಯಾರು ಬೇಕಾದರೂ ‘108’ ಸಂಖ್ಯೆಗೆ ಕರೆ ಮಾಡಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.</p>.<p>ಆದರೆ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳಿನಿಂದ ಟೈರ್ ಇಲ್ಲ ಎಂದು ಆಂಬುಲೆನ್ಸ್ ಅನ್ನು ಮೂಲೆಯಲ್ಲಿ ನಿಲ್ಲಿಸಿದ್ದಾರೆ.</p>.<p>ಆಂಬುಲೆನ್ಸ್ಗೆ ಒಂದು ಟೈರು ಹಾಕಿಸುವ ಶಕ್ತಿ ಸರ್ಕಾರಕ್ಕೆ ಇಲ್ಲವೇ? ಒಂದು ವೇಳೆ ಸರ್ಕಾರ ಟೈರ್ ಹಾಕಿಸಲು ಹಿಂದೇಟು ಹಾಕಿದರೆ ಆಸ್ಪತ್ರೆ ಅಥವಾ ದಾನಿಗಳ ಸಹಕಾರದಿಂದ ಟೈರ್ ಹಾಕಿಸಿದ್ದರೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಸಾರ್ವಜನಿಕರು.</p>.<p>ಖಾಸಗಿಯವರ ದಂಧೆ: ನಗರದಲ್ಲಿ ಖಾಸಗಿ ಆಂಬ್ಯುಲೆನ್ಸ್ಗಳ ದರ್ಬಾರ್ ಹೆಚ್ಚಾಗಿದ್ದು, ಇವರ ಪ್ರಭಾವಕ್ಕೆ ಮಣಿದು ಆಸ್ಪತ್ರೆ ಆಡಳಿತ ಮಂಡಳಿಯವರು ಆಂಬ್ಯುಲೆನ್ಸ್ ಅನ್ನು ಮೂಲೆಯಲ್ಲಿ ನಿಲ್ಲಿಸಿದ್ದಾರೆ ಎಂದು ರೋಗಿಗಳು ದೂರುತ್ತಾರೆ.</p>.<p>ಸರ್ಕಾರಿ ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಖಾಸಗಿ ಆಂಬ್ಯುಲೆನ್ಸ್ಗಳು ನಿಂತಿದ್ದು, ಅನಿವಾರ್ಯವಾಗಿ ಜನರು ಹೆಚ್ಚು ಹಣ ತೆತ್ತು ಇವುಗಳಲ್ಲಿ ಹೋಗಬೇಕಿದೆ. ಆಸ್ಪತ್ರೆಯ ಕೆಲವು ಸಿಬ್ಬಂದಿ ಇವರ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದು ರೋಗಿಗಳು ಸಂಕಷ್ಟ ಪಡುವಂತಾಗಿದೆ ಎಂದೂ ಆರೋಪಿಸಿದ್ದಾರೆ.</p>.<p>ಮೇಲಧಿಕಾರಿಗಳು ಎಚ್ಚೆತ್ತು ಆಂಬುಲೆನ್ಸ್ಗೆ ಹೊಸ ಟೈರ್ ಹಾಕಿಸುವ ಮೂಲಕ ರೋಗಿಗಳ ನೋವಿಗೆ ಸ್ಪಂದಿಸಬೇಕು ಎಂದು ರೋಗಿಗಳು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>