ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಶ್ರೀ ಬರೆದಿಟ್ಟಿರುವಂತೆ ಅವರ ಕ್ರಿಯಾಸಮಾಧಿ ನಡೆಯಲಿದೆ: ಸಿದ್ಧಲಿಂಗ ಶ್ರೀ

Last Updated 22 ಜನವರಿ 2019, 5:52 IST
ಅಕ್ಷರ ಗಾತ್ರ

ತುಮಕೂರು:ಹಿರಿಯ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರು ಬರೆದಿಟ್ಟಿರುವಂತೆ ಅವರ ಅಪೇಕ್ಷೆಯಂತೆ ಅಂತಿಮ ಕ್ರಿಯಾಸಮಾಧಿಯನ್ನು ನೆರವೇರಿಸಲಾಗುವುದು ಎಂದು ಸಿದ್ಧಗಂಗಾಶ್ರೀಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಬೆಳಿಗ್ಗೆ, ಮಠದ ಆವರಣದಲ್ಲಿನ ವ್ಯವಸ್ಥೆ, ಪ್ರಸಾದ, ಕ್ರಿಯಾಸಮಾಧಿ ವಿಧಿವಿಧಾನಗಳ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ನಿನ್ನೆ ಮತ್ತು ಇಂದು ಭಕ್ತರು ಹಿರಿಯ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರ ದರ್ಶನ ಪಡೆಯುತ್ತಿದ್ದಾರೆ. ಮಧ್ಯಾಹ್ನ 3ರವರೆಗೆ ದರ್ಶನಕ್ಕೆ ಅವಕಾಶವಿದೆ. ಬಳಿಕ 4ರಿಂದ ಕ್ರಿಯಾಸಮಾಧಿಯ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. 5 ಗಂಟೆಯ ಬಳಿಕ ಅಂತಿಮ ಕ್ರಿಯಾಸಮಾಧಿ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.

ತಮ್ಮ ಅಂತಿಮ ಕ್ರಿಯಾವಿಧಾನಗಳು ಹೇಗೆ ನಡೆಯಬೇಕು ಎಂದು ಶ್ರೀಗಳು ಬರೆದಿಟ್ಟಿದ್ದಾರೆ. ಶ್ರೀಗಳ ಅಪೇಕ್ಷೆಯಂತೆಯೇ ನೆರವೇರಿಸಲಾಗುವುದು. ಶ್ರೀಗಳು ಬರೆದಿಟ್ಟಿರುವುದನ್ನು ತೆಗೆದು ನೋಡಿ ಅದರಂತೆ ಮಾಡುತ್ತೇವೆ. ಶ್ರೀಗಳು ತಮ್ಮ ಹಿರಿಯ ಗುರುಗಳಾದ ಉದ್ಧಾನ ಶಿವಯೋಗಿಗಳಿಗೆ ಕ್ರಿಯಾಸಮಾಧಿ ನೆರವೇರಿಸಿದಂತೆಯೇ ಶಿವಕುಮಾರ ಶ್ರೀಗಳಿಗೂ ನೆರವೇರಿಸುತ್ತೇವೆ ಎಂದು ತಿಳಿಸಿದರು.

* ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT