ಕುದೂರು: ತಿಪ್ಪಸಂದ್ರ ಹೋಬಳಿಯ ಬಗಿನಿಗೆರೆ ಗ್ರಾಮದ ರೈತ ಕೃಷ್ಣಪ್ಪ ಅವರಿಗೆ ಸೇರಿದ ಎರಡು ಸೀಮೆ ಹಸು ಹಾಗೂ ಒಂದು ಕರು ಕಳ್ಳತನವಾಗಿವೆ.
ಕೃಷ್ಣಪ್ಪ ಅವರು ರಾತ್ರಿ ವೇಳೆ ಹಸುಗಳನ್ನು ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ ಹಸುಗಳ ಕಳ್ಳತನವಾಗಿರುವುದು ತಿಳಿದಿದೆ.
ಗ್ರಾಮದೆಲ್ಲೆಡೆ ಹುಡುಕಿದಾಗ ಚಿಗಳೂರುನಲ್ಲಿ ಹಸುಗಳನ್ನು ವಧಿಸಿರುವ ಕಳ್ಳರು ಚರ್ಮ ಮತ್ತು ಮಾಂಸವನ್ನು ಕೊಂಡೊಯ್ದು, ಬೇಡದ್ದನ್ನು ಬಿಟ್ಟಿಹೋಗಿರುವುದು ತಿಳಿದಿದೆ.
₹2 ಲಕ್ಷ ಬೆಲೆ ಬಾಳುವ ಹಸುಗಳು ನಾಪತ್ತೆಯಾಗಿವೆ ಎಂದು ರೈತ ಕೃಷ್ಣಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.