‘ಮಂಗಳವಾರ ಎಳನೀರು, ಹಣ್ಣಿನ ರಸ ಸೇವಿಸಿದ್ದ ಸ್ವಾಮೀಜಿ ಬುಧವಾರವೂ ದ್ರವರೂಪದ ಆಹಾರ ಸೇವಿಸಿದ್ದಾರೆ. ಎಳನೀರು, ಹಣ್ಣಿನ ರಸದ ಜೊತೆಗೆ ಗಂಜಿಯನ್ನು ಸೇವಿಸಿದ್ದಾರೆ. ಬುಧವಾರವೇ ವಿಶೇಷ ವಾರ್ಡ್ಗೆ ಸ್ಥಳಾಂತರ ಮಾಡಲು ಉದ್ದೇಶಿಸಲಾಗಿತ್ತು. ಡಾ.ಮಹಮ್ಮದ್ ರೇಲಾ ಅವರು ಗುರುವಾರ ಸ್ಥಳಾಂತರ ಮಾಡುವುದಾಗಿ ಹೇಳಿದ್ದಾರೆ‘ ಎಂದು ಸ್ವಾಮೀಜಿ ಚಿಕಿತ್ಸೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ತುಮಕೂರು ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.