<p><strong>ತುರುವೇಕೆರೆ:</strong> ‘ನಮ್ಮೂರು ಮೂಲಸೌಕರ್ಯಗಳಿಲ್ಲದ ಕುಗ್ರಾಮವಾಗಿರುವುದರಿಂದ ಜನರ ಸೇವೆಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎನ್ನುತ್ತಾರೆ ಸಿ.ವಿ. ಮೋಹನ್ಕುಮಾರ್.</p>.<p>ತಾಲ್ಲೂಕಿನ ತಾಳ್ಕೆರೆ ಗ್ರಾಮ ಪಂಚಾಯಿತಿ ಚೆಂಡೂರು ಕ್ಷೇತ್ರದ ಅಭ್ಯರ್ಥಿ ಮೋಹನ್ಬಿ.ಇಡಿ., ಎಂ.ಎ. ಪದವೀಧರರು.</p>.<p>ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ 13 ವರ್ಷಗಳಿಂದ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮೋಹನ್ ಕುಮಾರ್ ಕೋವಿಡ್ ಕಾರಣದಿಂದ ಶಾಲೆಗಳಿಗೆ ರಜೆ ಇರುವುದರಿಂದ ಮನೆಯಲ್ಲಿಯೇ ಇದ್ದಾರೆ.</p>.<p>‘ಗ್ರಾಮದ ಸಮಸ್ಯೆಗಳು ನಿತ್ಯ ಕಣ್ಣಿಗೆ ರಾಚತೊಡಗಿದವು. ಗ್ರಾಮಗಳಿಗೆ ಕೋಟಿಗಟ್ಟಲೇ ಅನುದಾನ ಬಂದರೂ ಗ್ರಾಮದ ಅಭಿವೃದ್ಧಿ ಸಾಧ್ಯವಾಗಿಲ್ಲ ಎನ್ನುವುದು ಪ್ರಶ್ನಾರ್ಥಕವಾಯಿತು. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಪಾರದರ್ಶಕ ಆಡಳಿತ ನೀಡಬೇಕೆಂಬ ಬಯಕೆಯಿಂದ ಸ್ಪರ್ಧಿಸಿದ್ದೇನೆ’ ಎನ್ನುತ್ತಾರೆ ಮೋಹನ್.</p>.<p>ಗ್ರಾಮಕ್ಕೆ ಚರಂಡಿ ಇರಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕಾರಿಗಳ ಗಮನ ಸೆಳೆದು ಚರಂಡಿ ಮಾಡಿಸುವಲ್ಲಿ ಯಶಸ್ವಿ<br />ಯಾದೆ. ಪಂಚಾಯಿತಿ ಅವ್ಯವಹಾರಗಳ ವಿರುದ್ಧ ಕಾನೂನು ಸಮರ ಸಾರಿದ್ದು, ಆ ಪ್ರಕರಣ ಇಂದಿಗೂ ನಡೆಯುತ್ತಿದೆ ಎನ್ನುತ್ತಾರೆ ಅವರು.</p>.<p>ಊರಿನ ಎಷ್ಟೊ ಮನೆಗಳಿಗೆ ಕೃಷಿಹೊಂಡ, ಶೌಚಾಲಯ, ದನದಕೊಟ್ಟಿಗೆ, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಹಲವು ಸರ್ಕಾರಿ ಸವಲತ್ತು ಸಿಗುವಂತೆ ಮಾಡಿದ್ದೇನೆ. ಮತ ನೀಡುವಂತೆ ಜನರಿಗೆ ಯಾವುದೇ ಆಮಿಷ ಒಡ್ಡುವುದಿಲ್ಲ. ಜನಪರ ಕಾರ್ಯ<br />ಮುಂದಿಟ್ಟುಕೊಂಡು ಮತ ಕೇಳುತ್ತೇನೆ ಎನ್ನುವುದು ಅವರ ನಿಲುವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ:</strong> ‘ನಮ್ಮೂರು ಮೂಲಸೌಕರ್ಯಗಳಿಲ್ಲದ ಕುಗ್ರಾಮವಾಗಿರುವುದರಿಂದ ಜನರ ಸೇವೆಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎನ್ನುತ್ತಾರೆ ಸಿ.ವಿ. ಮೋಹನ್ಕುಮಾರ್.</p>.<p>ತಾಲ್ಲೂಕಿನ ತಾಳ್ಕೆರೆ ಗ್ರಾಮ ಪಂಚಾಯಿತಿ ಚೆಂಡೂರು ಕ್ಷೇತ್ರದ ಅಭ್ಯರ್ಥಿ ಮೋಹನ್ಬಿ.ಇಡಿ., ಎಂ.ಎ. ಪದವೀಧರರು.</p>.<p>ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ 13 ವರ್ಷಗಳಿಂದ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮೋಹನ್ ಕುಮಾರ್ ಕೋವಿಡ್ ಕಾರಣದಿಂದ ಶಾಲೆಗಳಿಗೆ ರಜೆ ಇರುವುದರಿಂದ ಮನೆಯಲ್ಲಿಯೇ ಇದ್ದಾರೆ.</p>.<p>‘ಗ್ರಾಮದ ಸಮಸ್ಯೆಗಳು ನಿತ್ಯ ಕಣ್ಣಿಗೆ ರಾಚತೊಡಗಿದವು. ಗ್ರಾಮಗಳಿಗೆ ಕೋಟಿಗಟ್ಟಲೇ ಅನುದಾನ ಬಂದರೂ ಗ್ರಾಮದ ಅಭಿವೃದ್ಧಿ ಸಾಧ್ಯವಾಗಿಲ್ಲ ಎನ್ನುವುದು ಪ್ರಶ್ನಾರ್ಥಕವಾಯಿತು. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಪಾರದರ್ಶಕ ಆಡಳಿತ ನೀಡಬೇಕೆಂಬ ಬಯಕೆಯಿಂದ ಸ್ಪರ್ಧಿಸಿದ್ದೇನೆ’ ಎನ್ನುತ್ತಾರೆ ಮೋಹನ್.</p>.<p>ಗ್ರಾಮಕ್ಕೆ ಚರಂಡಿ ಇರಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕಾರಿಗಳ ಗಮನ ಸೆಳೆದು ಚರಂಡಿ ಮಾಡಿಸುವಲ್ಲಿ ಯಶಸ್ವಿ<br />ಯಾದೆ. ಪಂಚಾಯಿತಿ ಅವ್ಯವಹಾರಗಳ ವಿರುದ್ಧ ಕಾನೂನು ಸಮರ ಸಾರಿದ್ದು, ಆ ಪ್ರಕರಣ ಇಂದಿಗೂ ನಡೆಯುತ್ತಿದೆ ಎನ್ನುತ್ತಾರೆ ಅವರು.</p>.<p>ಊರಿನ ಎಷ್ಟೊ ಮನೆಗಳಿಗೆ ಕೃಷಿಹೊಂಡ, ಶೌಚಾಲಯ, ದನದಕೊಟ್ಟಿಗೆ, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಹಲವು ಸರ್ಕಾರಿ ಸವಲತ್ತು ಸಿಗುವಂತೆ ಮಾಡಿದ್ದೇನೆ. ಮತ ನೀಡುವಂತೆ ಜನರಿಗೆ ಯಾವುದೇ ಆಮಿಷ ಒಡ್ಡುವುದಿಲ್ಲ. ಜನಪರ ಕಾರ್ಯ<br />ಮುಂದಿಟ್ಟುಕೊಂಡು ಮತ ಕೇಳುತ್ತೇನೆ ಎನ್ನುವುದು ಅವರ ನಿಲುವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>